i
ಮರ್ಯಾದಾ ಪುರುಷೋತ್ತಮನ ಮರ್ಯಾದೆ ತೆಗೆದ ಬಿಜೆಪಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮರ್ಯಾದಾ ಪುರುಷೋತ್ತಮನ ಮರ್ಯಾದೆ ತೆಗೆದ ಬಿಜೆಪಿ ಶ್ರೀರಾಮನಿಗೆ ಕೈಕೆಯಿಗಿಂತ ಹೆಚ್ಚು ಅವಮಾನಿಸಿದೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷವು ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದೆ.ಮೋದಿ ಎದುರು ಶ್ರೀರಾಮನನ್ನು ಕುಬ್ಜನನ್ನಾಗಿಸಿದ ಬಿಜೆಪಿ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತಂದಿದೆ, ಶ್ರೀರಾಮನಿಗೆ ಮೋದಿಯೇ ಮಾರ್ಗದರ್ಶಕ ಎಂಬಂತೆ ಚಿತ್ರಿಸಿದ ಬಿಜೆಪಿ ದೇವರ ಪೂಜೆಗಿಂತ ವ್ಯಕ್ತಿ ಪೂಜೆಯೇ ಶ್ರೇಷ್ಠ ಎಂದು ಪ್ರತಿಪಾಧಿಸುತ್ತಿದೆ. ಅಂದು ರಾವಣನನ್ನು ಸಂಹರಿಸಿದ್ದ ರಾಮನಿಂದಲೇ ಇಂದು ಬಿಜೆಪಿ ಸಂಹಾರ ನಡೆಯುವುದು ಖಚಿತ! ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ.