i
ವದ್ದಿಕೆರೆ ಕಾಲ ಭೈರವೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ಧಿಗೆ ಒತ್ತು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕು ಐಮಂಗಲ ಹೋಬಳಿ ವದ್ದೀಕೆರೆ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ಎಂ ಕಾರ್ತಿಕ್, ಮುಜರಾಯಿ ಅಧಿಕಾರಿ ಹಾಗೂ ಹಿರಿಯೂರು ತಹಶೀಲ್ದಾರ್ ರಾಜೇಶ್ ಕುಮಾರ್ ಸಿ ಅವರ ಅಧ್ಯಕ್ಷತೆಯಲ್ಲಿ ಮುಜರಾಯಿ “ಎ” ಪ್ರವರ್ಗದ ದೇವಾಲಯದ ಅಭಿವೃದ್ಧಿ ವಿಷಯವಾಗಿ ಶ್ರೀಕಾಲಭೈರವೇಶ್ವರ ಸ್ವಾಮಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಸಭೆ ಕರೆಯಲಾಗಿದ್ದು ಸಭೆಯಲ್ಲಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ಆದ್ಯತೆ ನೀಡಲಾಗುತ್ತದೆ ಎಂದು ಚರ್ಚಿಸಲಾಯಿತು.
ವದ್ದಿಕೆರೆ ಗ್ರಾಮದ ಮೇಕೆಸಿದ್ದಪ್ಪನವರ ರಾಮಚಂದ್ರಪ್ಪ, ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯ ವ್ಯವಸ್ಥಾಪನ ಸಮಿತಿ ಸದಸ್ಯರಾದ ಕಲಾವತಿ ಸಿದ್ದಪ್ಪ, ರತ್ನಮ್ಮ.ಬಿ ಚಂದ್ರಶೇಖರ್, ಈ.ಸಿದ್ದಪ್ಪ ಡಿ.ಚಂದ್ರಣ್ಣ ಸಿ.ಸತ್ಯನಾರಾಯಣಗೌಡ ಕೆ.ಮಹೇಶ್ವರಪ್ಪ, ಶ್ರೀನಿವಾಸ.ಟಿ, ಕಾರ್ಯನಿರ್ವಾಹಣಾಧಿಕಾರಿ, ಪದ ನಿಮಿತ್ತ ಕಾರ್ಯದರ್ಶಿ ಹಾಗೂ ಉಪ ತಹಶೀಲ್ದಾರ್ ಕೆ.ವಿ.ವೀರಭದ್ರಪ್ಪ, ರಾಜಸ್ವ ನಿರೀಕ್ಷಕರು ಹಾಗೂ ಮುಜರಾಯಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.