i
ಪೊಲೀಸ್ ಪೇದೆ ಮಹೇಂದ್ರ ಅಕಾಲಿಕ ಸಾವು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: Untimely death of police constable Mahendra…
ಅನಾರೋಗ್ಯದಿಂದ ಚಿತ್ರದುರ್ಗದ ಪೊಲೀಸ್ ಪೇದೆ ಸಾವು ಕಂಡಿದ್ದಾರೆ.
ಮಹೇಂದ್ರ ಎಸ್. (26) ಅವರು ಚಿತ್ರದುರ್ಗ ನಗರ ಠಾಣೆ ಪೊಲೀಸ್ ಪೇದೆ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮಲ್ಲಸಮುದ್ರ ಗ್ರಾಮದ ನಿವಾಸಿ ಆಗಿರುವ ಮಹೇಂದ್ರ
ಡಿ.28 ರಿಂದ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ವೈದ್ಯರು ರೆಫರ್ ಮಾಡಿದ್ದರು.
ಬೆಂಗಳೂರು ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಮಹೇಂದ್ರ ಸಾವನ್ನಪ್ಪಿದ್ದಾರೆ.
ಜಿಬಿ ಸಿಂಡ್ರೋಂ ಖಾಯಿಲೆಯಿಂದ ಬಳಲುತ್ತಿದ್ದ ಪೇದೆ ಮಹೇಂದ್ರ.
ಬಡತನದಲ್ಲಿಯೇ ಓದಿ ಪೊಲೀಸ್ ನೌಕರಿ ಪಡೆದಿದ್ದ ಪೇದೆ ಮಹೇಂದ್ರ.
2018 ರಲ್ಲಿ KSRP ಪೊಲೀಸ್ ಆಗಿ 3 ವರ್ಷ ಸೇವೆ ಸಲ್ಲಿಸಿದ್ದರು.
2022 ರಲ್ಲಿ ಸಿವಿಲ್ ಪೊಲೀಸ್ ಗೆ ಆಯ್ಕೆಯಾಗಿ ನಗರ ಠಾಣೆಯಲ್ಲಿ ಕರ್ತವ್ಯ ಮಾಡಿದ್ದರು.
ಬಡತನದಲ್ಲಿಯೇ ಮನೆಯ ಜವಾಬ್ದಾರಿ ಹೊತ್ತು ನೌಕರಿ ಪಡೆದಿದ್ದ ಮಹೇಂದ್ರ.
ಬದುಕು ಹಸನಾಗುವ ಸಮಯಕ್ಕೆ ಮಾರಕ ಖಾಯಿಲಿಗೆ ಬಲಿಯಾಗಿದ್ದಾರೆ.
ತನ್ನ ಕುಟುಂಬಕ್ಕೆ ಆಧಾರ ಸ್ಥಂಭವಾಗಿದ್ದ ಪೇದೆ ಮಹೇಂದ್ರ.
ಕರ್ತವ್ಯ ನಿಷ್ಠೆಗೆ ಮೇಲಾಧಿಕಾರಿ ಸಿಬ್ಬಂಧಿಗಳಿಂದ ಸೈ ಎನಿಸಿಕೊಂಡಿದ್ದರು.
ಮಹೇಂದ್ರನ ಅಕಾಲಿಕ ಸಾವಿಗೆ ಚಿತ್ರದುರ್ಗ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ.