i
ಕ್ರೀಡೆಯಿಂದ ಭಾವೈಕ್ಯತೆ- ಭ್ರಾತೃತ್ವ ಬೆಳೆಸಲು ಸಾಧ್ಯ: ಡಿ.ಎಸ್. ಅರುಣ್…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಯಾವುದೇ ವ್ಯಕ್ತಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢನಾಗುವುದಲ್ಲದೆ ದೈನಂದಿನ ಕಾರ್ಯಗಳನ್ನು ಉತ್ಸಾಹದಿಂದ ಮಾಡಲು ಸಹಾಯವಾಗುತ್ತದೆ. ಅಲ್ಲದೆ ಕ್ರೀಡೆಯಿಂದ ರಾಷ್ಟ್ರೀಯ ಭಾವೈಕ್ಯತೆ, ಭ್ರಾತೃತ್ವ ಬೆಳೆಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅಭಿಪ್ರಾಯಿಸಿದರು.ನಗರದ ಗಾಂಧಿಬಜಾರ್ನ ಹನುಮಾನ್ ಬಾಯ್ಸ್ ತಂಡವು ಪರೋಪಕಾರಂ ಕುಟುಂಬದ ಸಹಯೋಗದೊಂದಿಗೆ ಇಲ್ಲಿನ ಕೃಷಿ ಕಾಲೇಜ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಶ್ರೀರಾಮ ಆಯೋಧ್ಯ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕ್ರೀಡೆಯ ಮೂಲಕ ಕ್ರಿಕೆಟ್ ಪ್ರೇಮಿಗಳು ಮತ್ತು ಯುವಜನರನ್ನು ಭಾರತೀಯತೆ ಹಾಗೂ ರಾಷ್ಟ್ರಪ್ರೇಮದ ಮುಖ್ಯ ವಾಹಿನಿಗೆ ಸೆಳೆಯಲು ಅನುಕೂಲವಾಗುತ್ತದೆ. ಅಲ್ಲದೆ ಯುವಜನರು ಅನಾರೋಗ್ಯಕರ ಚಟುವಟಿಕೆಗಳಲ್ಲಿ ತೊಡಗುವುದನ್ನು ತಡೆಗಟ್ಟಬಹುದು ಎಂದರು.ಶ್ರೀರಾಮನ ಜೀವನ, ಆದರ್ಶ ಗುಣಗಳು ವಿಚಾರ ಮಾಡಿದಷ್ಟು ಉದಾತ್ತವಾಗಿವೆ. ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಶ್ರೀರಾಮನ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಆಗ ಮಾನವೀಯತೆಯ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯವೆಂದರು.ಪ್ರಧಾನಿ ನರೇಂದ್ರ ಮೋದೀಜಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದರಿಂದಾಗಿ ದೇಶದಲ್ಲಿ ೨ ಕೋಟಿ ೮೦ ಲಕ್ಷ ಶೌಚಾಲಯಗಳು ನಿರ್ಮಾಣಗೊಂಡಿವೆ. ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪರೋಪಕಾರಂ ಕುಟಂಬವು ಸಾರ್ವಜನಿಕ ಸ್ಥಳಗಳಲ್ಲಿ ನಿರಂತರವಾಗಿ ಸ್ವಚ್ಛತಾ ಕಾರ್ಯಗಳನ್ನು ನಡೆಸುವ ಮೂಲಕ ಮಾದರಿಯಾಗಿದೆ. ಈ ಕುಟುಂಬದ ಶ್ರೀಧರ್ ಎನ್.ಎಂ. ಅವರು ನಮಗೆಲ್ಲಾ ಪ್ರೇರಣೆಯಾಗಿದ್ದಾರೆ ಎಂದು ಮೆಚ್ಚಗೆ ವ್ಯಕ್ತಪಡಿಸಿದರು. ಪರೋಪಕಾರಂ ಶ್ರೀಧರ್ ಎನ್.ಎಂ., ಲೀಲಾಬಾಯಿ ಎನ್.ಎಂ., ಸಾರಥಿ ಶಿವಾನಂದ್, ಹನುಮಾನ್ ಬಾಯ್ಸ್ ತಂಡದ ದಿನೇಶ್ ದಾಸ್ ವೈಷ್ಣವ್ (ಚಾಯ್ವಾಲಾ), ಓಂ ಪ್ರಕಾಶ್, ಜಿ.ವಿ. ಪಾಂಡುರಂಗಪ್ಪ, ಕಾರ್ಪೆಂಟರ್ ಕುಮಾರ್, ರಾಘವೆಂದ್ರ ಎನ್.ಎಂ., ನರಪತ್ ಪಟೇಲ್, ಗೀತಾ ಶಿವಾನಂದ್, ವಿಜಯ್ ಕಾರ್ತಿಕ್, ವೈಶಾಖ, ಕಾವೇರಿ, ಗೌತಮ್ ಮತ್ತಿತರರು ಉಪಸ್ಥಿತರಿದ್ದರು.