i
ಗಿರಿಜಾ ಕಲ್ಯಾಣ ಜಾತ್ರಾ ಮಹೋತ್ಸವ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ 11ನೇ ವಾರ್ಡಿನ ಗಂಗಸಂದ್ರಶ್ರೀ ಗಂಗಾಧರೇಶ್ವರ ಸ್ವಾಮಿ ಪಾರ್ವತಿ ದೇವಿಯವರ 15ನೇ ವರ್ಷದ ಗಿರಿಜಾ ಕಲ್ಯಾಣ ಜಾತ್ರಾ ಮಹೋತ್ಸವನ್ನು ಏರ್ಪಡಿಸಲಾಗಿತ್ತು. ಭಾನುವಾರ ಸಂಜೆ ಗೋಧೋಳಿ ಮುಹೂರ್ತದಲ್ಲಿ ಗಂಗಾಪೂಜೆ, ವಿಘ್ನೇಶ್ವರ ಪೂಜೆ ಕಳಸ ಸ್ಥಾಪನೆ ನಂತರ ಪೂರ್ಣ ಕುಂಭ ಮೇಳಗಳ ಮೂಲಕ ನಡೆ ಮುಡಿವೊಂದಿಗೆ ಶ್ರೀ ಸ್ವಾಮಿಯವರ ದೇವಾಲಯ ಪ್ರವೇಶ ನೆರವೇರಲಿತು.ರಾತ್ರಿ 8 ಗಂಟೆಗೆ ಕಳಸ ಸ್ಥಾಪನೆ ಮಹೋತ್ಸವ ಪುಣ್ಯಹ ನಾಂದಿ ಪಂಚಕಳಸ ನವಗ್ರಹ* ದುರ್ಗಾದೇವತೆ ಅಷ್ಟದಿಕ್ಪಾಲಕರ ಪೂಜೆ ನಡೆದು ನಂತರ ಹೋಮದಿ ಕಾರ್ಯಕ್ರಮಗಳ ಜರುಗಿದವು.ಜನವರಿ-15ರಂದು ಸೋಮವಾರ ಬೆಳಗ್ಗೆ 5 ರಿಂದ 6 ಗಂಟೆ ಒಳಗೆ ಸಲ್ಲುವ ಬ್ರಾಹ್ಮಿ ಮುಹೂರ್ತದಲ್ಲಿ ಪಾಣಿ ಗ್ರಹಣ ಮೂಲಕ ಶ್ರೀ ಗಂಗಾಧರೇಶ್ವರ ಸ್ವಾಮಿಯವರ ಗಿರಿಜಾ ಕಲ್ಯಾಣ ಮಹೋತ್ಸವವನ್ನು ಸಮಸ್ತ ಭಕ್ತರುಗಳ ಮೂಲಕ ನೆರವೇರಿಸಲಾಗುವುದು. ನಂತರ ರಾಜೋಪಚಾರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತುಮಕೂರು ಸಂಸದ ಜಿ ಎಸ್ ಬಸವರಾಜು, ಶಾಸಕಜಿ.ಬಿ. ಜ್ಯೋತಿ ಗಣೇಶ್, ಮಾಜಿ ಶಾಸಕ ಎಸ್ ಶಿವಣ್ಣ, 11ನೇ ವಾರ್ಡಿನಎಂ ಕೆ ಮನು ಮುಖ್ಯಅತಿಥಿಗಳಾಗಿರುತ್ತಾರೆ. ಸೋಮವಾರ ಮಧ್ಯಾಹ್ನ 3ಗಂಟೆಯಿಂದ ವೀರರ ಕುಣಿತ ನಂದಿದ್ವಜ ಚಿಟ್ಟಿಮೇಳ ವಾದ್ಯಗಳೊಂದಿಗೆ ಊರಿನ ರಾಜಬೀದಿಗಳಲ್ಲಿ ಶ್ರೀ ಸ್ವಾಮಿಯವರ ಉತ್ಸವವನ್ನು ಏರ್ಪಡಿಸಲಾಗಿರುತ್ತದೆ. ರಾತ್ರಿ9 ಗಂಟೆಗೆ ಸ್ವಾಮಿಗೆ ವಸಂತೋತ್ಸವಶಯನೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಗಂಗಸಂದ್ರ ಗ್ರಾಮದ ಸುತ್ತಮುತ್ತ ಗ್ರಾಮಸ್ಥರುಗಳಿಗೆ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಏರ್ಪಡಿಸಲಾಗಿರುತ್ತದೆ ಎಂದು ಗ್ರಾಮದ ಭಕ್ತಾದಿಗಳು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.