i
ಹೊಸ ದ್ಯಾಮವ್ವನಹಳ್ಳಿ ಆಶಾಗೆ ಪಿ.ಎಚ್.ಡಿ. ಪದವಿ ಪ್ರದಾನ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಹೊಸ ದ್ಯಾಮವ್ವನಹಳ್ಳಿ ಗ್ರಾಮದ ಆಶಾ ಜಿ.ಬಿ. ಇವರಿಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಪಿ.ಎಚ್.ಡಿ. ಪದವಿ ನೀಡಿದೆ.ಸಮಾಜ ವಿಜ್ಞಾನಗಳ ಅಭಿವೃದ್ದಿ ಅಧ್ಯಯನ ವಿಭಾಗದ ಡಾ.ಪ್ರಜ್ಞಾ ಕೆ.ವಿ.ರವರ ಮಾರ್ಗದರ್ಶನದಲ್ಲಿ ತಳ ಮಟ್ಟದ ಮಹಿಳಾ ಅಭಿವೃದ್ದಿ ಕಾರ್ಯಕರ್ತೆಯರ ಕಾರ್ಯಕ್ಷಮತೆ ಎಂಬ ವಿಷಯದಲ್ಲಿ ಮಹಾ ಪ್ರಬಂಧ ಮಂಡಿಸಿದ ಆಶಾ ಜಿ.ಬಿ.ರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ೩೨ ನೇ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಪಿ.ಎಚ್.ಡಿ. ಪದವಿ ಪ್ರಮಾಣ ಪತ್ರ ನೀಡಿ ಗೌರವಿಸಿದರು.