i
ಹಾಸ್ಯನಟ ಚಿಕ್ಕಣ್ಣ ನಾಯಕನಾಗಿರುವ ಉಪಾಧ್ಯಕ್ಷ ಸಿನಿಮಾ ಜ. 26ಕ್ಕೆ ಬಿಡುಗಡೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ದಶಕದ ಹಿಂದೆ ತೆರೆಕಂಡು ಜನಪ್ರಿಯವಾಗಿದ್ದ ಚಿತ್ರ ಅಧ್ಯಕ್ಷ. ಹಾಸ್ಯನಟ ಶರಣ್ ಚಿತ್ರದ ನಾಯಕನಾಗಿ ಅಭಿನಯಿಸಿದ್ದರು. 12 ವರ್ಷಗಳ ನಂತರ ಇದೀಗ ಆ ಚಿತ್ರದ ಸೀಕ್ವೆಲ್ ಅಂದರೆ ಅದರ ಮುಂದುವರೆದ ಭಾಗವಾಗಿ ಉಪಾಧ್ಯಕ್ಷ ತಯಾರಾಗಿದ್ದು, ಜ.26ಕ್ಕೆ ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ನಟ ಚಿಕ್ಕಣ್ಣ, ಡಿ.ಎನ್.ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶಕ್ತಿ, ಕ್ಯಾಂಬೋ 2, ಕೃಷ್ಣ ರುಕ್ಕು ಖ್ಯಾತಿಯ ಅನಿಲ್ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿಕ್ಕಣ್ಣ ಈ ಚಿತ್ರದ ಮೂಲಕ ಮೊದಲಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಮಾಪತಿಗೌಡ ಅವರು ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ನಿರ್ದೇಶಕ ಅನಿಲ್ಕುಮಾರ್ ಮಾತನಾಡುತ್ತ ಉಪಾಧ್ಯಕ್ಷ, ಅಧ್ಯಕ್ಷ ಚಿತ್ರದ ಮುಂದುವರೆದ ಪಕ್ಕಾ ಮನರಂಜನಾತ್ಮಕ ಚಿತ್ರವಾಗಿದೆ ಎಂದರು.
ಲಾಕ್ಡೌನ್ ಸಮಯದಲ್ಲಿ ಚಂದ್ರಮೋಹನ್ ಈ ಕಥೆ ಹೇಳಿದರು. ಆನಂತರ ನಿರ್ಮಾಪಕ ಉಮಾಪತಿ ಅವರಿಗೆ ಹೇಳಿದಾಗ ಅವರೂ ಕಥೆಯನ್ನು ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದರು. ಈ ಟೈಟಲನ್ನೂ ಸಹ ಅವರೇ ಅಲ್ಲಿಂದಲೇ ಉಪಾಧ್ಯಕ್ಷನ ಕಥೆ ಶುರುವಾಗುತ್ತದೆ ಎಂದರು. ಕೊಟ್ಟಿದ್ದು. ರವಿಶಂಕರ್ಗೌಡ ಅವರು ಶಿವರುದ್ರೇಗೌಡರಾಗೇ ನಟಿಸಿದ್ದಾರೆ, ಆ ಚಿತ್ರದಲ್ಲಿ ಕಥೆ ಎಲ್ಲಿಗೆ ನಿಂತಿತ್ತೋ, ನಾಯಕ ಚಿಕ್ಕಣ್ಣ ಮಾತನಾಡುತ್ತ ನಾನು ಈವರೆಗೆ ಸುಮಾರು 250ಕ್ಕೂ ಹೆಚ್ಚು ನಾಯಕನಾಗಿ ಇದು ಮೊದಲ
ಚಿತ್ರಗಳಲ್ಲಿ ನಟಿಸಿದ್ದೇನೆ. ಚಿತ್ರ ಉಪಾಧ್ಯಕ್ಷ ಚಿತ್ರದಲ್ಲಿ ಕುಟುಂಬಸಮೇತ ಮುಜುಗರವಿಲ್ಲದೆ ಬಂದು ನೋಡಬಹುದಾದ ಹಳ್ಳಿಸೊಗಡಿನ ಕಥೆಯಿದೆ. ಅಧ್ಯಕ್ಷ ಚಿತ್ರ ನೋಡದವರಿಗೂ ಸಹ ಈ ಸಿನಿಮಾ ಅರ್ಥವಾಗುತ್ತೆ, ಆ ಚಿತ್ರದ ಬಗ್ಗೆ ತೋರಿಸಿಯೇ ಈ ಸಿನಿಮಾ ಕಂಟಿನ್ಯೂ ಮಾಡುತ್ತೇವೆ. ಜೊತೆಗೆ ಒಂದೊಳ್ಳೇ ಲವ್ಸ್ಟೋರಿ ಕೂಡ ಇದೆ. ಚಿತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದೇನೆ. ಈಗಾಗಲೇ ನಮ್ಮ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಜನರ ಮನ ಗೆದ್ದಿವೆ. ನಾನು ಕನ್ನಡದ ತುಂಬಾ ಜನ ಸ್ಟಾರ್ಗಳ ಜೊತೆ ಅಭಿನಯಿಸಿದ್ದೇನೆ, ಆ ಎಲ್ಲ ಸ್ಟಾರ್ಗಳ ಒಂದಷ್ಟು ಫ್ಯಾನ್ಸ್ ಬಂದು ನಮ್ಮ ಸಿನಿಮಾ ನೋಡಿದರೆ, ಚಿತ್ರ ಖಂಡಿತವಾಗಿಯೂ ಗೆಲ್ಲುತ್ತೆ ಎಂದು ಹೇಳಿದರು. ನಾಯಕಿ ಮಲೈಕ ಮಾತನಾಡಿ , ಇಡೀ ಸಿನಿಮಾ
ಪ್ರೇಕ್ಷಕರನ್ನು ನಗಿಸುತ್ತದೆ, ಲೈಫ್ನಲ್ಲಿ ಎಷ್ಟೇ ಸ್ಟೆಸ್ ಇದ್ದರೂ ಚಿತ್ರ ನೋಡಿದ ಮೇಲೆ ಅದೆಲ್ಲ ಮರೆತುಹೋಗುತ್ತದೆ. ಚಿಕ್ಕಣ್ಣ ಅವರಿಗೆ ಇದು ತುಂಬಾ ಸ್ಪೆಷಲ್ ಸಿನಿಮಾ ಎಂದರು.
ನಟ ಧರ್ಮಣ್ಣ ಮಾತನಾಡಿ ಗಾರೆ ಕೆಲಸ ಮಾಡ್ತಿದ್ದ ಹುಡುಗ ಹೀರೋ ಆಗ್ತಿದಾನೆ ಅಂದ್ರೆ ಸುಲಭದ ಮಾತಲ್ಲ ಎಂದು ಹೇಳಿದರು.
ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ, ಶೇಖರ್ ಚಂದ್ರ ಅವರ ಛಾಯಾಗ್ರಹಣ, ರಾಜಶೇಖರ್ ಅವರ ಸಂಭಾಷಣೆ, ಕೆ.ಎಂ.ಪ್ರಕಾಶ್ ಅವರ ಸಂಕಲನ, ಮೋಹನ್ ಬಿ.ಕೆರೆ ಅವರ ಕಲಾನಿರ್ದೇಶನವಿದೆ. ಸಾಧುಕೋಕಿಲ, ರವಿಶಂಕರ್, ಧರ್ಮಣ್ಣ ಮುಂತಾದವರು ಉಳಿದ ಪಾತ್ರವರ್ಗದಲ್ಲಿದ್ದಾರೆ.