i
ಜಿಲ್ಲೆಯ ಮುಸ್ಲೀಮರಿಗೆ ನಿಗಮ-ಮಂಡಳಿಯಲ್ಲಿ ಒಂದು ಹುದ್ದೆ ಕೊಡಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ರಾಜ್ಯದ ನಿಗಮ-ಮಂಡಳಿಗಳಿಗೆ ನೇಮಕಾತಿಯ ಮಾಹಿತಿ ಲಭ್ಯವಾಗಿದ್ದು, ಅದರಲ್ಲಿ ಜಿಲ್ಲೆಯ ನಾಲ್ಕ್ಐದು ಮುಖಂಡರಿಗೆ ಅಧ್ಯಕ್ಷ ಸ್ಥಾನ ದೊರೆತಿರುವುದಾಗಿ ಗೊತ್ತಾಗಿದೆ. ಆದರೆ ಇದರಲ್ಲಿ ಮುಸ್ಲೀಮರಿಗೆ ಒಂದೂ ಹುದ್ದೆ ಇಲ್ಲ. ಆದ್ದರಿಂದ ಒಂದು ಹುದ್ದೆಯನ್ನು ಮುಸ್ಲೀಮರಿಗೆ ನೀಡಬೇಕೆಂಬ ಹಕ್ಕೊತ್ತಾಯವನ್ನು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡರು ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಡಿಸಿಸಿ ಪ್ರ, ಕಾರ್ಯದರ್ಶಿ ಅಫ್ತಾಬ್ ಅಹಮದ್ ಪರ್ವೇಜ್ ಮತ್ತು ಮಾಜಿ ಕಾರ್ಪೊರೇಟರ್ ಮೊಹಮ್ಮದ್ ಆಸೀಫ್, ಅಲ್ಪಸಂಖ್ಯಾತ ಘಟಕದ ಮಾಜಿ ಜಿಲ್ಲಾಧ್ಯಕ್ಷ ಆರೀಫ್ ಮೊದಲಾದವರು, ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಶೇ. ೯೮ರಷ್ಟು ಮುಸ್ಲೀಮರು ಕಾಂಗ್ರೆಸನ್ನು ಜಿಲ್ಲೆಯಲ್ಲಿ ಬೆಂಬಲಿಸಿದ್ದಾರೆ. ಇದರಿಂದ ಮೂರು ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ಜೊತೆಗೆ ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಮಾಜಿ ಎಂಎಲ್ಸಿ ಪ್ರಸನ್ನಕುಮಾರ್, ಅಭ್ಯರ್ಥಿಯಾಗಿದ್ದ ಯೋಗೇಶ್ ಮೊದಲಾದ ನಾಯಕರು, ಅಧಿಕಾರಕ್ಕೆೆ ಬಂದಲ್ಲಿ ಸಮುದಾಯದವರಿಗೆ ಪ್ರಮುಖ ಹುದ್ದೆ ಕೊಡುವ ವಾಗ್ದಾನವನ್ನು ಮುಸ್ಲೀಮ್ ಧರ್ಮಗುರುಗಳ ಸಮ್ಮುಖದಲ್ಲಿ ಮಾಡಿದ್ದರು ಎನ್ನುವುದನ್ನು ನೆನಪಿಸಿದರು.ಈ ಹಿನ್ನೆಲೆಯಲ್ಲಿ ಸುಡಾ ಅಧ್ಯಕ್ಷ ಹುದ್ದೆಯನ್ನು ಮಾತಿನಂತೆ ಮುಸ್ಲೀಮರಿಗೆ ನೀಡಬೇಕು. ಸಮಾಜದವರು ಕಾಂಗ್ರೆಸ್ ಬೆನ್ನಿಗಿದ್ದಾರೆ. ಇದರ ಲಾಭ ಪಡೆಯಬೇಕು. ಮುಂಬರುವ ಚುನಾವಣೆಗಳಲ್ಲೂ ಇದು ಕಾಂಗ್ರೆಸ್ಗೆ ಅನುಕೂಲಕರ ವಾತಾವರಣ ನಿರ್ಮಿಸಲಿದೆ ಎಂದರು.ಕೆಪಿಸಿಸಿ ಅಧ್ಯಕ್ಷರಿಗೆ ಈ ಸಂಬಂಧ ಜಿಲ್ಲಾ ಸಮಿತಿ ಆಗ್ರಹ ಮಾಡಿ ಒಂದು ಹುದ್ದೆ ಮುಸ್ಲಿಮರಿಗೆ ಕೊಡಿಸಬೇಕು. ಇದು ಸಮಾಜದ ತೀರ್ಮಾನವೂ ಹೌದು. ಬೇಸರದ ಜೊತೆಗೆ ತಮ್ಮ ಆಗ್ರಹ ಮತ್ತು ಹಕ್ಕೊತ್ತಾಯ ಇದಾಗಿದೆ ಎಂದ ಅವರು, ಕೆಪಿಸಿಸಿ ಮುಖಂಡರು ತಮ್ಮ ಆಗ್ರಹವನ್ನು ಪುರಸ್ಕರಿಸುವರೆಂಬ ವಿಶ್ವಾಸವಿದೆ ಎಂದರು.ಪತ್ರಿಕಾಗೋಷ್ಟಿಯಲ್ಲಿ ಅಬ್ದುಲ್ ಮುನೀರ್ ಮುನಾವರ, ನಯಾಜ್ ಅಹಮದ್, ಮಝರ್ ಮೊದಲಾದವರಿದ್ದರು.