i
ದೇವರ ಎತ್ತುಗಳಿಗೆ ಮೇವು ವಿತರಿಸಿದ ಶಾಸಕ ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೇವರ ಎತ್ತುಗಳಿಗೆ ಮೇವಿನ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ತಾಲೂಕಿನ ತುರುವನೂರು ಹೋಬಳಿ ವ್ಯಾಪ್ತಿಯ ಬೆಳಗಟ್ಟ ಮತ್ತು ಹಾಯ್ಕಲ್ ಗ್ರಾಮದಲ್ಲಿ ದೇವರ ಎತ್ತುಗಳಿಗೆ ಮೇವು ವಿತರಿಸಿ ಮಾತನಾಡಿದರು. ಬೆಳಗಟ್ಟ ಮತ್ತು ಹಾಯ್ಕಲ್ ಗ್ರಾಮಗಳು ಸೇರಿ ಸುಮಾರು ೧೫೦ ಕ್ಕೂ ಹೆಚ್ಚು ರಾಸುಗಳು ದೇವರ ಎತ್ತುಗಳು ಇದ್ದು ಈಗ ೯ ಲೋಡ್ ಮೇವು ಒದಗಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ಮೇವಿನ ಕೊರತೆಯಾಗದಂತೆ ಮೇವು ಸರಬರಾಜು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಬೆಳಘಟ್ಟ ಗ್ರಾಮದಲ್ಲಿ ಗೋಶಾಲೆ ಸ್ಥಳ ವಿಕ್ಷಣೆ ಮಾಡಿಲಾಗಿದೆ. ಶೀಫ್ರ ಗೋಶಾಲೆ ತೆರಯಲಾಗುತ್ತದೆ. ದೇವರ ಎತ್ತುಗಳನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಪರಂಪರೆಯ ಉಳಿಯಬೇಕಾಗಿದೆ. ಈ ಬಾರಿ ಮಳೆ ಬಾರದ ಕಾರಣ ಮೇವಿನ ಸಮಸ್ಯೆ ಎದುರಾಗಿದ್ದು ಸರ್ಕಾರ ಎಲ್ಲಾ ಸಿದ್ದತೆ ಮಾಡಿಕೊಂಡಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗವೇಣಿ , ಮಾಜಿ. ಜಿ.ಪಂ.ಸದಸ್ಯ ಬಾಬುರೆಡ್ಡಿ, ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜಮ್ಮ ಪಾಲಯ್ಯ, ಉಪಾಧ್ಯಕ್ಷ ರಾಮಚಂದ್ರರೆಡ್ಡಿ, ಗ್ರಾಮ ಸದಸ್ಯರಾದ ಕೆ.ಸಿ.ಪಾಲಯ್ಯ, ಕಮಲಮ್ಮ, ನ್ಯಾಮಲ ಪಾಲಯ್ಯ, ಪಶುಸಂಗೋಪನ ಇಲಾಖೆ ಸಹಾಯಕ ನಿರ್ದೇಶಕಿ ಇಂದಿರಾಬಾಯಿ, ಪಿಡಿಓ ವಿಶಾಲಕ್ಷಿ , ತುರುವನೂರು ಸಿಪಿಐ ಲತಾ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.