i
ಅಯ್ಯಪ್ಪನ ದರ್ಶನಕ್ಕೆ ಹೋದ ಭಕ್ತರೊಬ್ಬರು ಹೃದಯಾಘಾತದಿಂದ ಸಾವು…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳಿ ವಾಪಸಾಗುತ್ತಿದ್ದ ಇಲ್ಲಿನ ವಿನೋಬನಗರ ನಿವಾಸಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಮಂಜುನಾಥ್ (೬೦) ಸಾವನ್ನಪ್ಪಿದವರು. ಕೇರಳದ ಪಂಪಾದಲ್ಲಿ ದೇವರ ದರ್ಶನ ಪಡೆದು ವಾಪಾಸ್ ಆಗುವ ವೇಳೆ ಈ ಘಟನೆ ನಡೆದಿದೆ.
ಇದ್ದಕ್ಕಿದ್ದಂತೆ ಅವರು ಕುಸಿದುಬಿದ್ದಾಗ ತಕ್ಷಣ ಕೊಟ್ಟಾಯಂ ಆಸ್ಪತ್ರೆಗೆ ಅವರ ಜೊತೆಗೆ ಬಂದಿದ್ದ ಭಕ್ತರ ಬಳಗ ಕರೆದೊಯ್ದಿದೆ. ಆದರೆ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲೇ ಮೃತಪಟ್ಟರು. ಮಂಜುನಾಥ ಮೃತಪಟ್ಟಿದ್ದನ್ನು ವೈದ್ಯರು ದೃಢಪಡಿಸಿದ್ದಾರೆ. ಮೃತದೇಹವನ್ನು ಶಿವಮೊಗ್ಗಕ್ಕೆ ಶನಿವಾರ ಸಂಜೆ ತರಲಾಗಿದೆ.