i
ಬೈಕ್ ಅಪಘಾತ: ಬಿಕಾಂ ವಿದ್ಯಾರ್ಥಿ ಸಾವು…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಸಕ್ರೆಬೈಲಿನ ಕೆಂಪೇಗೌಡರ ಹೋಟೆಲಿಗೆ ಊಟಕ್ಕೆ ತೆರಳಿದ್ದ ಇಲ್ಲಿನ ಎಟಿಎನ್ಸಿಸಿ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿಯೊಬ್ಬ ಅಪಘತಕ್ಕೊಳಗಾಗಿ ಸಾವಿಗೀಡಾದ ಘಟನೆ ವರದಿಯಾಗಿದೆ.
ಗೋಪಾಳದ ನಿವಾಸಿ ಪ್ರಜ್ವಲ್(೨೦) ಸಾವಿಗೀಡಾದವನು. ಶುಕ್ರವಾರ ಮಧ್ಯಾಹ್ನ ಬೈಕಿನಲ್ಲಿ ಊಟಕ್ಕೆ ಸ್ನೇಹಿತರೊಂದಿಗೆ ಊಟಕ್ಕೆ ತೆರಳಿ ಮುಗಿಸಿಕೊಂಡು ಬರುವಾಗ ಹೋಟೆಲ್ನ ಮುಂದಿನಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರವಾಗಿ ಗಾಯಗಳಾಗಿದ್ದವು. ಬೈಕಿನ ಹಿಂಬದಿ ಸವಾರ ಪವನ್ ಎನ್ನುವವನಿಗೆ ತೀವ್ರ ಗಾಯವಾಗಿತ್ತು.
ತಕ್ಷಣವೇ ಅಂಬ್ಯುಲೆನ್ಸ್ನಲ್ಲಿ ಪವನ್ ಮತ್ತು ಪ್ರಜ್ವಲ್ನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ಪ್ರಜ್ವಲ್ ಸಾವನ್ನಪ್ಪಿರುವುದನ್ನು ವೈದ್ಯರು ಪ್ರಕಟಿಸಿದರು.