i
ಬಹಿರ್ದೆಸೆಗೆ ಹೋದ ವ್ಯಕ್ತಿ/ ಮೇಲೆ ಚಿರತೆ ದಾಳಿ…
ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ತಾಲೂಕಿನ ಬೊಮ್ಮಲಿಂಗನಹಳ್ಳಿ ಗ್ರಾಮದಲ್ಲಿ ಬಹಿರ್ದೆಸೆಗೆ ಹೋದ ವ್ಯಕ್ತಿಯೋರ್ವನ ಮೇಲೆ ಚಿರತೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಂಡ ದುಘ್ಟನೆ ಸಂಭವಿಸಿದೆ.
ಚಿರತೆ ದಾಳಿಗೆ ದಾಳಿಗೊಳಗಾಗಿ ಗಾಯಗೊಂಡ ವ್ಯಕ್ತಿ ಬಸವರಾಜ ೫೦ ವರ್ಷ ಬೊಮ್ಮಲಿಂಗನಹಳ್ಳಿ ಗ್ರಾಮದವನೆಂದು ಗುರುತಿಸಲಾಗಿದೆ. ಗಾಯಗೊಂಡ ಬಸವರಾಜನು ಶನಿವಾರ ಬೆಳಿಗ್ಗೆ ಸುಮಾರು ೭ : ೪೫ ರ ವೇಳೆಗೆ ಗ್ರಾಮದ ಬಳಿಯ ಸ್ಮಶಾನದ ಬಯಲು ಪ್ರದೇಶಕ್ಕೆ ಬಹಿರ್ದೆಸೆಗೆ ಹೋದಾಗ ಪಕ್ಕದಲ್ಲಿರುವ ಮರವೊಂದರ ಮರೆಯಲ್ಲಿ ಅವಿತುಕೂತಿದ್ದ ಚಿರತೆಯು ಏಕಾಏಕಿ ಬಸವರಾಜ ನ ಮೇಲೆ ದಾಳಿ ನಡೆಸಿ ಬಸವರಾಜನ ಹೊಟ್ಟೆಯ ಭಾಗದಲ್ಲಿ ಕರುಳು ಹೊರ ಬರುವಂತೆ ಗಂಭೀರವಾಗಿ ಗಾಯಗೊಳಿಸಲಾಗಿದೆ. ಗಾಯಗೊಂಡ ಬಸವರಾಜನು ಕಿರಿಚಿಕೊಂಡ ಪರಿಣಾಮ ಸುತ್ತ ಮುತ್ತಲಿನಲ್ಲಿದ್ದ ಗ್ರಾಮಸ್ಥರು ದೌಡಾಯಿಸಿದ ಪರಿಣಾಮ ಚಿರತೆಯು ಪರಾರಿಯಾಗಿದೆ. ಚಿರತೆಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಬಸವರಾಜನನ್ನು ಕೂಡಲೇ ಮೊಳಕಾಲ್ಮೂರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ಕರೆದೊಯ್ಯಲಾಗಿದೆ. ಚಿರತೆ ದಾಳಿಗೊಳಗದ ಬಸವರಾಜ ನ ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ವಸಂತ ವಿ ಅಸೋದೆ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಜಿ.ಪಾಮಡುರಂಗ ಹಾಗೂ ಪೊಲಿಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಹಿರ್ದೆಸೆಗೆ ತೆರಳಿದ್ದ ಬಸವರಾಜ ಮೇಲೆ ದಾಳಿ ನಡೆಸಿದ ಚಿರತೆಯನ್ನು ಸೆರೆಹಿಡಿಯಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.