i
ರಾಮನ ವೇಷ ಧರಿಸಿಯೇ ಕೋಚಿಂಗ್ಸೆಂಟರ್ಗೆ ಬಂದ ವಿದ್ಯಾರ್ಥಿ…
ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ವಿಶೇಷಗಳು-ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಸಂಸ್ಕೃತಿ ಕೋಚಿಂಗ್ ಸೆಂಟರ್ನಲ್ಲಿ ಈ ಘಟನೆ ನಡೆದಿದೆ. ಈ ಶಾಲೆಯಲ್ಲಿ ಸೋಮವಾರವೂ ಪರೀಕ್ಷೆ ಇತ್ತು. ಹಾಗಾಗಿ ರಜೆ ಕೊಟ್ಟಿರಲಿಲ್ಲ. ಈ ನಡುವೆ, 12 ವರ್ಷದ ಬಾಲಕ ಶ್ರೀಶಾಂತ್ ಕೋಟಿಹಾಳ ರಾಮನ ವೇಷ ಧರಿಸಿಯೇ ಕೋಚಿಂಗ್ಸೆಂಟರ್ಗೆ ಬಂದಿದ್ದ.ಅಯೋಧ್ಯೆಯಲ್ಲಿ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಮನೆಯವರು ಆತನನ್ನು ರಾಮನ ವೇಷ ಹಾಕಿ ಕಳಹಿಸಿದ್ದರು. ಶ್ರೀಶಾಂತ್ವೇಷ ಧರಿಸಿ ಬರುತ್ತಿದ್ದಂತೆಯೇ ಸಹಪಾಠಿಗಳು ಹೂವಿನ ಹಾಸಿಗೆ ಮೂಲಕ ಬರಮಾಡಿಕೊಂಡರು.ವಿದ್ಯಾರ್ಥಿಗಳು ʻಜೈ ಶ್ರೀರಾಮ್ʼ ಎಂದು ಘೋಷಣೆ ಮಾಡುತ್ತಾ ಹೂವಿನ ಮಳೆ ಸುರಿಸಿದರು. ಅದಾದ ಬಳಿಕ ಆ ಬಾಲಕನ ಪಾದ ಪೂಜೆಯನ್ನು ಮಾಡಿದರು. ಪಾದಗಳಿಗೆ ಜಲ ಸಿಂಚನ ಮಾಡಿ, ಗಂಧ ಲೇಪಿಸಿ ಸ್ವಾಮಿಸಿದರು. ಬಳಿಕ ಬಾಲಕ ಎಂದಿನಂತೆ ಪರೀಕ್ಷೆ ಬರೆದಿದ್ದಾನೆ.