i
ಸುತ್ತೂರು ಜಾತ್ರೆಗೆ ಮಹಿಷಾಸುರ ಮರ್ದಿನಿ ಪೌರಾಣಿಕ ನಾಟಕ ಆಯ್ಕೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಗದ್ಗುರು ವೀರಸಿಂಹಾಸನ ಸಂಸ್ಥಾನ ಮಠ, ಶ್ರೀ ಸುತ್ತೂರು ಕ್ಷೇತ್ರ, ನಂಜನಗೂಡು ತಾಲೂಕು, ಮೈಸೂರು ಜಿಲ್ಲೆಯ ಶ್ರೀಆದಿಜಗದ್ಗುರು ಶ್ರೀ ಶಿವರಾತ್ರೀರ ಶಿವಯೋಗಿಯವರ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ “ಶ್ರೀ ದೇವಿ ಮಹಾತ್ಮೆ ಅರ್ಥಾತ್ ಮಹಿಷಾಸುರ ಮರ್ದಿನಿ” ಎಂಬ ಸುಂದರ ಪೌರಾಣಿಕ ನಾಟಕವು ಆಯ್ಕೆಯಾಗಿದ್ದು ಈ ನಾಟಕದ ರಚನೆ ಆಲೂರು ಪುಟ್ಟಾಚಾರಿ ವಿರಚಿತ, ಸಂಗೀತ ನಿರ್ದೇಶನ ಬೆಳ್ಳಿ ಕಡಗ ಪುರುಷರು ಜಿ ವಿಶ್ವನಾಥ್ ಮಸ್ಕಲ್ ಕಲಾವಿದರು, ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಅಂಬಿಕಾ ಕೃಪಾ ಪೋಷಿತ ನಾಟಕ ಮಂಡಳಿ ಹೊಸಯಳನಾಡು ಗ್ರಾಮ ಹಿರಿಯೂರು ತಾಲೂಕು ಚಿತ್ರದುರ್ಗ ಜಿಲ್ಲೆ ಈ ಕಲಾವಿದರಿಂದ ಈ ನಾಟಕವನ್ನು ದಿನಾಂಕ 7/2/2024ರ ರಾತ್ರಿ 10 ಗಂಟೆಗೆ ನಾಟಕ ಪ್ರದರ್ಶನ ಮಾಡಲು ಅವಕಾಶ ನೀಡಿದ್ದಾರೆ ಎಂದು ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಅಧ್ಯಕ್ಷ ಕರಿಯಣ್ಣ ಡಿ ತಿಳಿಸಿದ್ದಾರೆ.
ಈ ಎಲ್ಲಾ ಕಲಾವಿದರಿಗೆ ಹೊಸಯಳನಾಡು ಗ್ರಾಮಸ್ಥರು ಹಾಗೂ ಚಿತ್ರದುರ್ಗ ಜಿಲ್ಲೆಯ ಸಮಸ್ತ ಜನರು ಶುಭ ಹಾರೈಸಿದ್ದಾರೆ.