i
ಕ್ಯಾನ್ಸರ್ ರೋಗ ಬಾರದಂತೆ ಎಚ್ಚರ ವಹಿಸಿ-ಡಾ.ಮಂಜುವಾಣಿ…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿ.ಈ. ಹೆಲ್ತ್ ಕೇರ್ ಹಾಗೂ ಪೀಪಲ್ ಟು ಪೀಪಲ್ ಹೆಲ್ತ್ ಫೌಂಡೇಷನ್ ಇವರ ಆಶ್ರಯದಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವೀರೆಗೌಡ ಮಾತನಾಡಿ ಪೀಪಲ್ ಟೂ ಪೀಪಲ್ ಹೆಲ್ತ್ ಫೌಂಡೇಷನ್ ನವರು ಗ್ರಾಮವನ್ನು ಗುರುತಿಸಿ ಸಾಂಕ್ರಾಮಿಕ ರೋಗದಂತಹ ಕ್ಯಾನ್ಸರ್ ತಪಾಸಣೆ ಮಾಡುತ್ತಿದ್ದು ತುಂಬಾ ಜನರಿಗೆ ಉಪಯುಕ್ತ ಆಗುತ್ತಿದೆ ಎಂದರು .
ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ರವಿಕುಮಾರ್ ಮಾತನಾಡಿ, ಜನರ ಆರೋಗ್ಯದ ಮೇಲೆ ದುಷ್ಪರಿಣಾ ಬೀರುವಂತ ಗುಟ್ಕಾ, ತಂಬಾಕು, ಹನ್ಸ್, ಇತರೆ ಪದಾರ್ಥಗಳನ್ನು ಜನರು ಸೇವನೆ ಮಾಡುವುದರಿಂದ ಕ್ಯಾನ್ಸರ್ ರೋಗ ಬರಲಿದ್ದು ಇದರಿಂದ ದೂರ ಇರುವುದರ ಜೊತೆಯಲ್ಲಿ ಸದಾ ಜಾಗಗೃತರಾಗಿರಬೇಕು ಎಂದು ತಿಳಿಸಿದರು.
ಪ್ರತಿ ತಿಂಗಳು ಇಂತಹ ಆರೋಗ್ಯ ತಪಾಸಣೆಯಿಂದ ಜನರು ಜಾಗೃತರಗುತ್ತಾರೆ ಆರೋಗ್ಯದಿಂದ ಬದುಕುತ್ತಾರೆ ಮತ್ತು ರಕ್ತದೊತ್ತಡ, ಶುಗರ್ ಇರುವವರಿಗೆ ಯಾವುದೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ವೈದ್ಯ ಅಧಿಕಾರಿ ಡಾ.ಮಂಜುವಾಣಿ ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೌಲಭ್ಯ ಪಡೆಯಲು ಹಾಗೂ ಸರ್ಕಾರದಿಂದ ಉಚಿತ ಸೌಲಭ್ಯ ಪಡೆಯಲು ಮುಂದೆ ಬರಬೇಕೆಂದು ಸಾರ್ವಜನಿಕರಿಗೆ ಕರೆ ನೀಡಿದರು. ಈ ಸಂದರ್ಭ ದಲ್ಲಿ ಫೀಲ್ಡ್ ಕೊ ಅರ್ಡಿನೆಟರ್ ಶಿವಪ್ಪ ಆರೋಗ್ಯ ಜಗೃತಿ ಗೀತೆಗಳ ಮೂಲಕ ಆರೋಗ್ಯ ಹರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಪೀಪಲ್ ಟು ಪೀಪಲ್ ಹೆಲ್ತ್ ಫೌಂಡೇಷನ್ ಚೇತನ್ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಅಧಿಕಾರಿ ರೋಹಿಣಿ ಮತ್ತು ANM ಶಶಿಕಲಾ ಹಾಗೂ ಆಶಾ ಕಾರ್ಯಕರ್ತೆ ಸುನಂದಾ ಭಾಗವಹಿಸಿದ್ದರು.