![](https://www.chandravallinews.com/wp-content/uploads/2024/02/Smg-Sp-mitun-1.jpeg)
i
ದರೋಡೆಗೆ ಕಾದು ಕುಳಿತಿದ್ದ ನಾಲ್ವರು ಯುವಕರ ಸರೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ದರೋಡೆಗೆ ಸಂಚು ಹಾಕುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಸಾರಿಗೆ ಬಸ್ ಡಿಪೋ ಬಳಿ ಮಂಜುನಾಥ ಬಡಾವಣೆಗೆ ಹೋಗುವ ದಾರಿಯಲ್ಲಿ ದರೋಡೆಗೆ ಸಂಚು ಹಾಕಿದ್ದರು. ಡಿಪೋ ಪಕ್ಕದ ಎಕ್ಸಿಬಿಷನ್ ಜಾಗದಲ್ಲಿ ಮಂಜುನಾಥ ಬಡಾವಣೆಗೆ ಹೋಗಲು ಇರುವ 80 ಅಡಿ ರಸ್ತೆಯಲ್ಲಿ ಓಡಾಡುವ ಜನರಿಗೆ ಖಾರದ ಪುಡಿ ಎರಚಿ ಆಯುಧ ತೋರಿ ಚಿನ್ನಾಭರಣವನ್ನು ದೋಚಲು ಇವರು ಕಾದಿದ್ದರು.
ಮಾಹಿತಿ ಪಡೆದ ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಬಂದು ದರೋಡೆಗೆ ಸಂಚು ಹಾಕಿದವರನ್ನು ಬಂಧಿಸಿದ್ದಾರೆ.
ಅಕ್ರಿಖಾನ್, ಮುಸ್ತಾಕ್ ಅಹಮದ್, ಆದಿಲ್ ಪಾಶ, ಮಾಜ್ ಬೇಗ್ ಬಂಧಿತರು.
ಇವರ ಬಳಿಯಿದ್ದ ಆಯುಧಗಳು, ಖಾರದ ಪುಡಿ ಮತ್ತು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.