![](https://www.chandravallinews.com/wp-content/uploads/2024/02/bedi-1-1024x527.jpeg)
i
ದಲಿತ ಮಹಿಳೆಯರಿಗೆ ತೆಂಗಿನಕಾಯಿ ಚಿಪ್ಪಿನಲ್ಲಿ ಚಹಾ ಕೊಟ್ಟ ಇಬ್ಬರ ಬಂಧನ…
ಚಂದ್ರವಳ್ಳಿ ನ್ಯೂಸ್, ಧರ್ಮಪುರಿ:
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದಲಿತ ಮಹಿಳೆಯರಿಗೆ ಗ್ಲಾಸ್ ಬದಲಿಗೆ ತೆಂಗಿನ ಕಾಯಿಯ ಚಿಪ್ಪಿಯಲ್ಲಿ ಟೀಯನ್ನು ನೀಡಿರುವ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಡೆದಿದೆ.
ಧರ್ಮಪುರಿಯಲ್ಲಿ ದಲಿತ ಮಹಿಳೆಗೆ ಜಾತಿಯ ಕಾರಣಕ್ಕೆ ತಾರತಮ್ಯ ಮಾಡಿರುವ ಆರೋಪದಲ್ಲಿ ಇಬ್ಬರು ಮಹಿಳೆಯರನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಬಂಧಿಸಲಾಗಿದೆ. ಕೊಂಗು ವೆಳ್ಳಾಲರ್ ಸಮುದಾಯಕ್ಕೆ ಸೇರಿದ ಧರಣಿ ಮತ್ತು ಚಿನ್ನತಾಯಿ ಬಂಧಿತರು. ಸಂತ್ರಸ್ತೆಯಲ್ಲಿ ಓರ್ವ ಮಹಿಳೆಯ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಾರಪ್ಪ ನಾಯಕನಪಟ್ಟಿ ಗ್ರಾಮದ ಹೊಲದಲ್ಲಿ ಕೆಲಸಕ್ಕೆ ಹೋದ ಐವರು ಮಹಿಳೆಯರ ಬಗ್ಗೆ ಧರಣಿ ಮತ್ತು ಚಿನ್ನತಾಯಿ ಅಸ್ಪೃಶ್ಯತೆ ಆಚರಣೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಂತ್ರಸ್ತರು ಪರಿಶಿಷ್ಟ ಜಾತಿ ಸಮುದಾಯದ ಪರಯ್ಯರ್ ಸಮುದಾಯಕ್ಕೆ ಸೇರಿದವರು. ವಿಡಿಯೋದಲ್ಲಿ ಆರೋಪಿಗಳು ದಲಿತ ಎಂಬ ಕಾರಣಕ್ಕೆ ಟೀ ಗ್ಲಾಸ್ ಬದಲು ತೆಂಗಿನ ಚಿಪ್ಪಿನಲ್ಲಿ ಮಹಿಳೆಯರಿಗೆ ಟೀ ನೀಡಿ ಅವಮಾನಿಸಿದ್ದರು.