i
ಈ ಪ್ರಶಸ್ತಿ ಶಿಕ್ಷಕ ಸಮೂಹಕ್ಕೆ ಸಲ್ಲಬೇಕು-ಕ್ಷೇತ್ರ ಶಿಕ್ಷಣಾಧಿಕಾರಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ: This award goes to the group of teachers – Field Education Officer…
ರಾಷ್ಟ್ರಮಟ್ಟದ ಪ್ರಶಸ್ತಿ ಸಂದಿದ್ದು, ನನಗಲ್ಲ. ಇದು ಇಡೀ ಶಿವಮೊಗ್ಗದ ಶಿಕ್ಷಣ ವ್ಯವಸ್ಥೆಗೆ ಲಭಿಸಿದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್ಅಭಿಪ್ರಾಯಪಟ್ಟರು.
ಸೋಗಾನೆ ಹೊಸೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿಗೌರವ ಸ್ವೀಕರಿಸಿ ಮಾತನಾಡಿದರು.
ಯೋಗ್ಯತೆ ಮತ್ತು ಯೋಗದ ಫಲವಾಗಿ ಶಿವಮೊಗ್ಗದಲ್ಲಿಪುರಸ್ಕಾರ ಮನ್ನಣೆಗಳು ಸಿಕ್ಕಿವೆ. ಇದಕ್ಕೆ ಶಿಕ್ಷಕರ ಪ್ರೀತಿಯೇ ಮೂಲ ಕಾರಣವಾಗಿದ್ದು, ಪ್ರಶಸ್ತಿ ಮೌಲ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಇದರೊಂದಿಗೆ ಕೆಲಸದೆಡೆಗೆ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ಕೆಲಸವನ್ನು ಶ್ರದ್ಧೆ, ಪ್ರೀತಿ ಮತ್ತು ಬದ್ಧತೆಯಿಂದ ಮಾಡಿದರೆ ಖಂಡಿತ ಪ್ರತಿಫಲ ದೊರಕುತ್ತದೆ ಎನ್ನುವುದಕ್ಕೆ ನಾನು ಸಾಕ್ಷಿ ಎಂದರು.
ಲೀಲಾವತಿ, ಸೌಮ್ಯಾ ನಿರೂಪಿಸಿದರು. ವೈ.ಶಾಂತಮ್ಮ ಪ್ರಾರ್ಥಿ ಸಿದರು. ಶಾಲೆಯ ಮುಖ್ಯ ಶಿಕ್ಷ ಕಿ ಎಚ್.ಎಲ್. ಶೋಭಾ ಸ್ವಾಗತಿಸಿದರು. ಸಹಶಿಕ್ಷ ಕ ರಾಜು ಹೊನ್ನವಿಲೆ ವಂದಿಸಿದರು.
ಪ್ರಮುಖರಾದ ಧರ್ಮೆಪ್ಪ, ದಿನೇಶ್, ಶ್ರೀನಿವಾಸ್, ವಿಶ್ವನಾಥ್, ಮೋಹನ್,ವಾಸು, ಶಂಕ್ರಪ್ಪ, ದಾಮೋದರ್ಇತರರಿದ್ದರು