i
ಅಶ್ವಮೇಧ ಬಸ್ ಗಳಿಗೆ ಚಾಲನೆ ನೀಡಿದ ಉಪಮುಖ್ಯಮಂತ್ರಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಕೆಎಸ್ಆರ್ ಟಿಸಿಯ ಹತ್ತು ಅಶ್ವಮೇಧ ಬಸ್ಸುಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶನಿವಾರ ಚಾಲನೆ ನೀಡಿದರು.
ಅಲ್ಲಮಪ್ರಭು ಮೈದಾನದ ಆವರಣದಲ್ಲಿ ಕೆಎಸ್ಆರ್ಟಿಸಿ ಶಿವಮೊಗ್ಗ ವಿಭಾಗದ ಹತ್ತು ಅಶ್ವಮೇಧ ಬಸ್ಸುಗಳಿಗೆ ಚಾಲನೆ ನೀಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಪ್ರಮುಖರಾದ ಎಂ.ಶ್ರೀಕಾಂತ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು
ಕೆಎಸ್ಆರ್ಟಿಸಿ ಅಶ್ವಮೇಧ ಹೆಸರಿನ 100 ಬಸ್ಸುಗಳನ್ನು ರಸ್ತೆಗಿಳಿಸಿದೆ. ಇವು ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ವೇಗಧೂತ ಬಸ್ಸುಗಳಾಗಿವೆ.
ಅಶ್ವಮೇಧ ವಿಶೇಷತೆ ಏನು?
ಸಾಮಾನ್ಯ ಬಸ್ಸುಗಳು 3.189 ಮೀಟರ್ಎತ್ತರ ಹೊಂದಿದ್ದರೆ, ಅಶ್ವಮೇಧ ಬಸ್ಸುಗಳು 3.42 ಮೀಟರ್ಎತ್ತ ಹೊಂದಿವೆ. 52 ಬಕೆಟ್ಟೈಪ್ಸೀಟ್ಗಳನ್ನ ಹೊಂದಿವೆ. ಇದರಲ್ಲಿ ಪ್ರಯಾಣಿಕರು ಆರಾಮಾಗಿ ಕುಳಿತು ಪ್ರಯಾಣ ಆಸನ ಗುದ. ಬಸ್ಸಿನ ಮುಂದೆ ಮತ್ತು ಹಿಂದಿನ ಗಾಜುಗಳು ವಿಶಾಲವಾಗಿವೆ. ಕಿಟಕಿ ಫ್ರೇಮ್ಗಳು ಮತ್ತು ಮೇಲಿನ ಗಾಜುಗಳು ದೊಡ್ಡದಾಗಿವೆ. ಟಿಂಟೆಡ್ಗಾಜುಗಳನ್ನು ಹೊಂದಿವೆ. ಹೊರಭಾಗದಲ್ಲಿ ಅಶ್ವಮೇಧ ಕುದುರೆ ಸ್ಟಿಕ್ಕರ್, ಅಶ್ವಮೇಧದ ಟೈಟಲ್ಇದೆ.