i
ವಾಕಿಂಗ್ ಹೋದವನ ಮೇಲೆ ಕರಡಿ ದಾಳಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ನಗರದ ಗೋಪಾಲಗೌಡ ಬಡಾವಣೆಯಲ್ಲಿ ಕರಡಿ ಪ್ರತ್ಯಕ್ಷವಾಗಿದೆ. ಬೆಳಗ್ಗೆ ವಾಕಿಂಗ್ಗೆ ತೆರಳಿದ್ದ ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಕೂಡಲೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಗೋಪಾಲಗೌಡ ಬಡಾವಣೆಯ ಎಫ್ಬ್ಲಾಕ್ನಲ್ಲಿರವ ಡಿವಿಜಿ ಪಾರ್ಕ್ಸಮೀಪ ಕರಡಿ ಪ್ರತ್ಯಕ್ಷವಾಗಿದೆ. ಬೆಳಗ್ಗೆ ವಾಕಿಂಗ್ಗೆ ತೆರಳಿದ್ದ ಸ್ಥಳೀಯರಾದ ತುಕಾರಂ ಶೆಟ್ಟಿ ಎಂಬುವವರ ಮೇಲೆ ಕರಡಿ ದಾಳಿ ಮಾಡಿ ಅವರ ಹೊಟ್ಟೆ ಮೇಲೆ ಪರಚಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ ತುಕಾರಾಂ ಶೆಟ್ಟಿ, ‘ನಾಯಿಗಳು ಓಡಿಸಿಕೊಂಡು ಬಂದಿದ್ದರಿಂದ ಕರಡಿ ನನ್ನ ಕಡೆಗೆ ಓಡಿ ಬಂತು. ಪರಚಿ ಓಡಿ ಹೋಯಿತುʼ ಎಂದು ತಿಳಿಸಿದ್ದಾರೆ.
ಮಾಹಿತಿ ಪಡೆದು ಅರಣ್ಯಾಧಿಕಾರಿಗಳು ಧಾವಿಸಿದರೂ ಕರಡಿ ಕಣ್ಣಿಗೆ ಬೀಳಲಿಲ್ಲ.
ಘಟನೆಯಿಂದ ಸುತ್ತಮುತ್ತಲನಿವಾಸಿಗಳು ಭಯಭೀತರಾಗಿದ್ದಾರೆ.
ತುಕಾರಾಂಅವರ ಹೊಟ್ಟೆ ಮೇಲೆ ಕರಡಿ ಪರಚಿದೆ.