i
ಬ್ರೇಕ್ ಫೇಲ್ : 45 ಪ್ರಯಾಣಿಕರ ರಕ್ಷಿಸಿದ ಕೆಎಸ್ ಆರ್ ಟಿಸಿ ಬಸ್ ಚಾಲಕ…
ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಚಾರ್ಮಾಡಿ ಘಾಟ್ ನಲ್ಲಿ ಕೆಎಸ್ ಆರ್ ಟಿಸಿ ಬಸ್ ನ ಬ್ರೇಕ್ ಫೇಲ್ ಆದರೂ ಚಾಲಕ ಸಮಯಪ್ರಜ್ಞೆಯಿಂದ ಪ್ರಯಾಣಿಕರನ್ನು ಕಾಪಾಡಿದ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.
ಕಡೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ 45 ಪ್ರಯಾಣಿಕರಿದ್ದರು. ಘಾಟ್ ನಲ್ಲಿ ಬಸ್ ಬ್ರೇಕ್ ಏಕಾಏಕಿ ವಿಫಲಗೊಂಡಿತು. ಆದರೂ ಎದೆಗುಂದದ ಚಾಲಕ ವೇಗ ನಿಧಾನ ಮಾಡಿ ಡಿವೈಡರ್ ಗೆ ಡಿಕ್ಕಿ ಹೊಡೆಸಿ ಬಸ್ ನಿಲ್ಲುವಂತೆ ಮಾಡಿದನು. ಇದರಿಂದ ಒಮ್ಮೆಲೆ ವಿಪರೀತ ಹೊಗೆ ಸೃಷ್ಟಿಯಾಯಿತು. ನಂತರ ಪ್ರಯಾಣಿಕರನ್ನು ಕೆಳಗಿಳಿಸಿ ಬೇರೊಂದು ಬಸ್ ನಲ್ಲಿ ಕಳುಹಿಸಲಾಯಿತು.
ಪ್ರಯಾಣಿಕರು ಚಾಲಕನ ಚಾಕಚಕ್ಯತೆಯನ್ನು ಕೊಂಡಾಡಿದ್ದಾರೆ.