i
ರೈತರ ಹೋರಾಟಕ್ಕೆ ದೆಹಲಿ ಮಾದರಿಯಾಗಬೇಕು : ಕುರಬೂರು…
ಚಂದ್ರವಳ್ಳಿ ನ್ಯೂಸ್,
ಭದ್ರಾವತಿ: Delhi should be a model for farmers’ struggle: Kuraburu…
ರೈತರ ಹೋರಾಟಗಳು ಹಾವೇರಿ ಮತ್ತು ದೆಹಲಿಯಲ್ಲಿ ಆಗಿರುವಂತೆ ಆಗಬೇಕೇ ವಿನಹ ಮನರಂಜನೆ ಆಗಬಾರದೆಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ವಿಷಾಧ ವ್ಯಕ್ತಪಡಿಸಿದರು.
ಎಂಪಿಎಂ ಕಾರ್ಖಾನೆಗೆ ೪೮೨೫ ರೈತರು ೨೦೧೦-೧೧ ನೇ ಸಾಲಿನಲ್ಲಿ ಸರಬರಾಜು ಮಾಡಿದ ಕಬ್ಬು ಬೆಳೆಗಾರರಿಗೆ ಅಂದಿನ ಸರಕಾರ ಘೋಷಿಸಿದ್ದ ಹೆಚ್ಚುವರಿ ೧೦೦/-ರೂ ಬಾಕಿ ಒಟ್ಟು ೩ ಕೋಟಿ ರೂಗಳನ್ನು ರಾಜ್ಯ ಸರಕಾರ ನೀಡುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರ ಸಂಘವು ಗುರುವಾರ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದಪ್ರತಿಭಟನಾ ಧರಣಿಯಲ್ಲಿ ಪಾಳ್ಗೊಂಡು ಮಾತನಾಡಿ ದರು..
ಹೋರಾಟಗಳಿಲ್ಲದೆ ದಪ್ಪ ಚರ್ಮದ ಸರಕಾರಗಳು ರೈತರ ಯಾವ ಸಮಸ್ಯೆಗಳನ್ನು ಈಡೇರಿಸಲಾರವು. ಹಾವೇರಿಯಲ್ಲಿ ಬೆಂಕಿ ಹಚ್ಚಿದಂತೆ ಮತ್ತು ದೆಹಲಿ ಮಾದರಿ ಹೋರಾಟಗಳು ಆದರೆ ಮಾತ್ರ ಬೇಡಿಕೆಗಳು ಈಡೇರಲು ಸಾಧ್ಯ. ರಾಜಕಾರಣಿಗಳು ಓಟಿಗಾಗಿ ಮಾತ್ರ ಬರುತ್ತಾರೆ. ನಂತರ ಐಶಾರಾಮಿ ಜೀವನಕ್ಕೆ ಕಾರ್ಪೋರೇಟ್ ಸಂಸ್ಥೆಗಳಿಗೆ ಮಣೆ ಹಾಕುತ್ತಾರೆ. ರೈತರ ಬಡವರ ಕಾರ್ಮಿಕರ ಗೋಳಿಗೆ ಸ್ಪಂಧಿಸುವುದಿಲ್ಲ. ಇಲ್ಲಿನ ಕಬ್ಬು ಬೆಳೆಗಾರರಿಗೆ ಕೇವಲ ೩ ಕೋಟಿ ರೂ ಕೊಡಿಸುವಲ್ಲಿ ಇಲ್ಲಿನ ಶಾಸಕರು ಸಂಸದರು ಜಿಲ್ಲಾ ಮಂತ್ರಿಗಳು ವಿಫಲರಾಗಿರುವುದು ತರವಲ್ಲ. ಅದೇ ಜನಪ್ರತಿನಿಧಿಗಳಿಗೆ ಲಂಚ ನೀಡಿದರೆ ಮುಖ್ಯಮಂತ್ರಿ ಬಳಿ ೩ ಕೋಟಿ ಅನುದಾನ ಬಿಡುಗಡೆ ಮಾಡಿಸುತ್ತಾರೆ. ಅಂತಹವರೇ ಹೆಚ್ಚು ಮಂದಿ ಆಯ್ಕೆಯಾಗಿದ್ದಾರೆ.
ಜನಪ್ರತಿನಿಧಿಗಳು ಜನರ ರೈತರ ಸೇವಕರೆಂದು ಮರೆತು ದರೋಡೆ ಮಾಡುತ್ತಾ ರಾಕ್ಷಸರಾಗಿದ್ದಾರೆ. ಡಿಸಿ ಎಸಿ ತಹಸೀಲ್ದಾರ್ ಮತ್ತಿತರೆ ಅಧಿಕಾರಿಗಳಿಗೆ ಒಂದು ತಿಂಗಳ ಸಂಬಳ ನೀಡದಿದ್ದರೆ ಸುಮ್ಮನಿರಲ್ಲ. ಆದರೆ ವರ್ಷಾನುಗಟ್ಟಲೆ ರೈತರ ಬಾಕಿ ಹಣ ಕೇಳಿದರೆ ಅಧಿಕಾರ ದರ್ಪ ತೋರುವುದು ಸಲ್ಲದು. ಹೋರಾಟಗಳು ನಡೆದಾಗ ಎಂಎಲ್ಎ, ಎಂಪಿ, ಜಿಲ್ಲಾ ಸಚಿವರು ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಬೇಕು ಅದೇ ನಿಜವಾದ ಜನಸೇವೆ. ಅದಕ್ಕೆ ತದ್ವರುದ್ದವಾಗಿ ನಡೆದು ಕೊಳ್ಳುತ್ತಿರುವುದು ವಿಷಾಧನೀಯ ಎಂದರು.