i
ಮಾ.18 ರಂದು ಶಿವಮೊಗ್ಗಕ್ಕೆ ಆಗಮನ, ಪೊಲೀಸ್ ಬಿಗಿ ಬಂದೋಬಸ್ತ್…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಮಾರ್ಚ್-18 ರಂದು ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಲ್ಲಮಪ್ರಭು ಮೈದಾನದಲ್ಲಿ ಈ ಸಂಬಂಧ ಬಹೃತ್ ವೇದಿಕೆ ನಿರ್ಮಿಸಲಾಗಿದೆ
ಮಧ್ಯಾಹ್ನ ಸರಿಯಾಗಿ 1.15ಕ್ಕೆ ವೇದಿಕೆಗೆ ಬರಲಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಸಾರ್ವಜನಿಕರು ಮಧ್ಯಾಹ್ನ 12.30ರೊಳಗೆ – ವೇದಿಕೆಗೆ ಬರಬೇಕು ಎಂದು ತಿಳಿಸಲಾಗಿದೆ.
ಬಿಎಚ್ರಸ್ತೆಯಲ್ಲಿರುವ ಸೈನ್ಸ್ಮೈದಾನ ಹಾಗೂ ಎಪಿಎಂಸಿ ಯಾರ್ಡ್ಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. 3 ಜನ ಎಸ್ಪಿ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ.
ಕಾರ್ಯಕ್ರಮ ನಡೆಯುವ ಅಲ್ಲಮಪ್ರಭು ಮೈದಾನ ಅಥವಾ ಫ್ರೀಡಂಪಾರ್ಕ್ನಲ್ಲಿ ಸಾವಿರ ಜನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತಿದೆ.
ಒಟ್ಟು 3 ಜನ ಎಸ್ಪಿ ,5 ಜನ ಎಎಸ್ಪಿ 36 ಹಾಗೂ 19 ಜನ ಡಿವೈಎಸ್ಪಿ ಹಾಗೂ 64 ಸಿಪಿಐ 156 ಜನ ಪಿಎಸ್ಐ ಹಾಗೂ ಒಂದು ಸಾವಿರ ಪೊಲೀಸ್ ಸಿಬ್ಬಂದಿ ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ.