i
ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಡಾ. ಜೆ. ಕರಿಯಪ್ಪ ಮಾಳಿಗೆ ನೇಮಕ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನಾಟಕ ಸರ್ಕಾರ ಡಾ.ಜೆ.ಕರಿಯಪ್ಪ ಮಾಳಿಗೆ ಅವರನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಿಸಿ ಆದೇಶ ಹೊಡಿಸಿದೆ.
ಪ್ರಸ್ತುತ ಇವರು ಸರ್ಕಾರಿ ಕಲಾ ಕಾಲೇಜಿನ, ಸ್ನಾತಕೋತ್ತರ ವಿಭಾಗದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಸಂಶೋಧಕರಾಗಿ, ಸಾಹಿತಿಗಳಾಗಿ ಸಂಘಟಕರಾಗಿ ಹೆಸರು ಪಡೆದಿದ್ದಾರೆ.
ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಕರಿಯಪ್ಪ ಮಾಳಿಗೆಯವರು ಚಿತ್ರದುರ್ಗ ಜಿಲ್ಲೆಯ ಗ್ರಾಮ ಚರಿತ್ರೆ ಕೋಶ, ಚಿತ್ರದುರ್ಗ ಜಿಲ್ಲೆಯ ತತ್ವಪದಗಳು, ಚಿತ್ರದುರ್ಗ ಜಿಲ್ಲೆಯ ಅವಧೂತರು, ಬಹುಮುಖಿ, ದಲಿತ ಪದವೀಧರರ ಸಮಸ್ಯೆಗಳು, ಬಳ್ಳಾರಿ ಜಿಲ್ಲೆಯ ಅವಧೂತರು, ಬಳ್ಳಾರಿ ಜಿಲ್ಲೆಯ ಅವಧೂತ ಪರಂಪರೆ, ಬಯಲ ಸೀಮೆಯ (ಚಿತ್ರದುರ್ಗ) ಅವಧೂತರು. ಮೋಳಿಗೆ ಮಾರಯ್ಯ ಮೊದಲಾದ 15ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.