i
ಬರಿದಾದ ತುಂಗಭದ್ರಾ ನದಿ ಒಡಲು; ಹಿತ-ಮಿತವಾಗಿ ನೀರು ಬಳಕೆಗೆ ಮನವಿ ಮಾಡಿದ ಪೌರಾಯುಕ್ತರು…
ಚಂದ್ರವಳ್ಳಿ ನ್ಯೂಸ್, ಹರಿಹರ:
ಮಳೆ ಬಾರದ ಹಿನ್ನೆಲೆಯಲ್ಲಿ ಬರಿದಾಗಿರುವ ತುಂಗಭದ್ರೆ ಯ ಒಡಲು ಆ ಕಾರಣಕ್ಕೆ ಹಿತ-ಮಿತವಾಗಿ ನೀರು ಬಳಕೆ ಮಾಡಲು ಸಾರ್ವಜನಿಕರಲ್ಲಿ ಪೌರಾಯುಕ್ತ ಐ.ಬಸವರಾಜ್ ಮನವಿ ಮಾಡಿ ಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ತುಂಗಭದ್ರಾ ನದಿ ಪಾತ್ರದಲ್ಲಿ ಮಳೆ ಬಾರದ ಕಾರಣ ನದಿಯ ಹರಿವು ತೀರಾ ಕಡಿಮೆಯಾಗಿದ್ದು ಕೌಲತ್ತು ಗ್ರಾಮದ ತೀರದಲ್ಲಿ ನದಿ ನೀರಿನ ಮಟ್ಟ ಕುಸಿದು ನೆಲಮಟ್ಟಕ್ಕೆ ಇಳಿದಿದೆ, ನಗರದಲ್ಲಿ ನೀರಿನ ಕೊರತೆ ತಲೆದೂರಿದೆ. ಸಾರ್ವಜನಿಕರು ನೀರನ್ನು ಹಿತ-ಮಿತವಾಗಿ ಬಳಕೆ ಮಾಡಲು ನಗರಸಭೆ ವತಿಯಿಂದ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ನಗರದ ಪ್ರತಿಯೊಂದು ವಾರ್ಡ್ ಗಳಿಗೆ ಈಗಾಗಲೇ ಜಲಸಿರಿ ಯೋಜನೆಯನ್ವಯ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.ಪ್ರಸ್ತುತ ರಾಜ್ಯದಲ್ಲಿ ಭೀಕರ ಬರಗಾಲ ಬಂದಿದ್ದು ಮಳೆಯಾಗದ ಹಿನ್ನೆಲೆ ಯಲ್ಲಿ ತುಂಗಭದ್ರ ನದಿಯ ಒಡಲು ಬರಿದಾಗಿತ್ತಾ ಬರುತ್ತಿದೆ. ಆದ್ದರಿಂದ ಸಾರ್ವಜನಿಕರು ನೀರನ್ನು ಅನ್ಯತವಾಗಿ ವ್ಯರ್ಥ ಮಾಡದೆ ಅವಶ್ಯಕತೆ ಮಾತ್ರ ಬಳಕೆ ಮಾಡಿ ನಮ್ಮೊಂದಿಗೆ ಸಹಕರಿಸಬೇಕು ಎಂದು ಹೇಳಿದರು.
ನೀರು ಅಮೂಲ್ಯವಾದದ್ದು ನೀರನ್ನು ಮಿತವಾಗಿ ಬಳಸುವುದನ್ನು ಎಲ್ಲರೂ ರೂಡಿಗತ ಮಾಡಿಕೊಳ್ಳುವುದು ಪ್ರಸ್ತುತ ದಿನಗಳಲ್ಲಿ ಅವಶ್ಯಕವಾಗಿದೆ. ನೀರು ಮತ್ತು ಪರಿಸರ ರಕ್ಷಣೆಯಲ್ಲಿ ಮಹಿಳೆ ಯರ ಪಾತ್ರ ಹಿರಿದಾಗಿದ್ದು ದೇವರ ಮನೆಯಿಂದ ಹಿಡಿದು ಅಡಿಗೆ ಮನೆ ಸೇರಿದಂತೆ ಇತರ ಕಡೆ ನೀರಿನ ನಿರ್ವಹಣೆ ಮಹಿಳೆಯರಿಂದ ನಡೆಯುತ್ತಿದ್ದು ನೀರನ್ನು ಮಿತ ಬಳಕೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಳೆದ ವರ್ಷ ಮಳೆ ಇಲ್ಲದೆ ಭೀಕರ ಬರಗಾಲ ರಾಜ್ಯದಲ್ಲಿದ್ದು ಈಗಾಗಲೇ ಕುಡಿಯುವ ನೀರಿಗಾಗಿ ಆಹಾಕಾರ ಆರಂಭವಾಗಿದೆ ನೀರನ್ನು ಬೇಕಾಬಿಟ್ಟಿಯಾಗಿ ಉಪಯೋಗಿಸುವುದನ್ನು ನಿಲ್ಲಿಸ ಬೇಕು.ಮುಂದಿನ ದಿನಗಳಲ್ಲಿ ನೀರಿಗಾಗಿ ಹೋರಾಟ ಪ್ರಾರಂಭ ವಾಗುವುದು ನಿಶ್ಚಿತವಾಗಿದೆ. ನದಿ ಪಾತ್ರದವರು ನೀರನ್ನು ಪೋಲು ಮಾಡುವುದನ್ನು ಮಾಡದೆ ಹಿತ-ಮಿತ ಕಾಯ್ದುಕೊಳ್ಳಬೇಕಿದೆ ಎಂದು ಹೇಳಿದರು.
ಜಲಸಿರಿ ಯೋಜನೆಯ ಅಧಿಕಾರಿಗಳು ಮತ್ತುಸಿಬ್ಬಂದಿಗಳು ದಿನಾಲು ನದಿ ಪಾತ್ರಕ್ಕೆ ಭೇಟಿ ನೀಡಿ ಜಾಕ್ ವೆಲ್ ಬಳಿ ಜೆಸಿಬಿಗಳ ಸಹಾಯದಿಂದ ನೀರನ್ನು ಶೇಕರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ನೀರಿನ ಸರಬರಾಜು ನಿಲ್ಲಿಸುವ ಅನಿವಾರ್ಯತೆ ಬರಬಹುದು ಆದರೂ ಭದ್ರಾ ಅಣೆಕಟ್ಟಿನಿಂದ ಮಂಗಳವಾರ ನೀರಿನ ಸರಬರಾಜು ಮಾಡುವ ನಿರೀಕ್ಷೆ ಇದೆ ನೀರು ಹರಿಸಿದರೇ ನೀರಿನ ಅಭಾವ ಸದ್ಯದಲ್ಲಿ ಸರಿ ಹೋಗಬಹುದು.
ಪ್ರಸ್ತುತ ಅಲ್ಲಿ ನಗರದ ವಾರ್ಡುಗಳಿಗೆ ನಿರಂತರ ನೀರು ಸರಬರಾಜಿನ ಬದಲಿಗೆ ಮುಂಜಾನೆ ಒಂದು ಗಂಟೆ ಹಾಗೂ ಸಂಜೆ ಒಂದು ಗಂಟೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಸಾರ್ವಜನಿಕರು ನೀರು ಬಂದಾಗ ಶೇಕರಿಸಿಕೊಂಡು ಬಳಕೆ ಮಾಡುವುದನ್ನು ರೂಡಿಸಿಕೊಳ್ಳಿರಿ ಎಂದು ಮತ್ತೊಮ್ಮೆ ಮನವಿ ಮಾಡಿದರು.
“ಪ್ರಸ್ತುತ ಪರಿಸ್ಥಿತಿಯಲ್ಲಿ ಮಳೆ ಬಾರದ ಕಾರಣಕ್ಕಾಗಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ ಕೆಲವೇ ದಿನಗಳಲ್ಲಿ ಬತ್ತುವ ಸಂಭವವಿದೆ ಆದ್ದರಿಂದ ಸಾರ್ವಜನಿಕರು ಮುಖ್ಯವಾಗಿ ಮಹಿಳೆಯರು ನೀರಿನ ಬಳಕೆ ಮಾಡುವಲ್ಲಿ ಇತಿಮಿತಿಯಿಂದ ನೀರನ್ನು ಬಳಕೆ ಮಾಡಿ ನೀರಿನ ಸರಬರಾಜು ಬಂದಾಗ ಮನೆಯಲ್ಲಿ ಶೇಖರಿಸಿ ಕೊಂಡು ಬಳಕೆ ಮಾಡಿಕೊಳ್ಳುವುದು ಉತ್ತಮ ಪರಿಸ್ಥಿತಿ ಸರಿ ಹೋದ ನಂತರ ನಿರಂತರವಾಗಿ ನೀರು ಹರಿಸಲು ನಗರಸಭೆ ಸದಾ ಸಿದ್ಧವಿರುತ್ತದೆ. ಮಂಗಳವಾರದಿಂದ ಭದ್ರ ಅಣೆಕಟ್ಟಿನಿಂದ ನೀರು ಹರಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ ನೀರು ಹರಿಸಿದರೆ ಸಮಸ್ಯೆ ಬಗ್ಗೆ ಹರಿಯಲಿದೆ”.
ಐ. ಬಸವರಾಜ್, ಪೌರಾಯುಕ್ತರು ನಗರಸಭೆ, ಹರಿಹರ.