i
ಪ್ರಚಾರಕ್ಕೆ ನನ್ನನ್ನು ಯಾರೂ ಕರೆಯಲ್ಲ: ರವಿಚಂದ್ರನ್…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇತ್ತೀಚೆಗಷ್ಟೇ ತಪಸ್ವಿ ಹೆಸರಿನ ಸಿನಿಮಾ ಮುಹೂರ್ತ ಮುಗಿಸಿಕೊಂಡಿದೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ರವಿಚಂದ್ರನ್ನಟಿಸಲಿದ್ದಾರೆ. ಸಿನಿಮಾ ಬಗ್ಗೆ ಮಾತನಾಡುತ್ತ, ರಾಜಕೀಯ ಪ್ರಚಾರದ ಬಗ್ಗೆಯೂ ಅವರಿಗೆ ಪ್ರಶ್ನೆಯೊಂದು ಎದುರಾಗಿದೆ. ಅದಕ್ಕೆ ಉತ್ತರಿಸಿದ ಅವರು, “ಈ ವರೆಗೂ ನನಗೆ ಚುನಾವಣೆ ಪ್ರಚಾರಕ್ಕೆ ಯಾರೂ ಕರೆದಿಲ್ಲ. ನನಗನಿಸಿದ ಮಟ್ಟಿಗೆ ಅದಕ್ಕೆ ನನ್ನ ಜಾತಿ ಅಡ್ಡ ಬರಬಹುದು ಅಂತ ನನಗೆ ಅನಿಸುತ್ತೆ. ಅದು ನನಗೆ ಅಷ್ಟಾಗಿ ಗೊತ್ತಿಲ್ಲ. ಈ ನಡುವೆ ನನ್ನ ಆಪ್ತರು ಕರೆದರೆ, ಅತ್ತ ಕಡೆಯಿಂದ ಫೋನ್ಬಂದರೆ, ನಾನು ಖಂಡಿತ ಪ್ರಚಾರಕ್ಕೆ ಹೋಗುತ್ತೇನೆ” ಎಂದಿದ್ದಾರೆ ರವಿಚಂದ್ರನ್.
ನನಗೆ ವ್ಯಕ್ತಿ ಬೇಕು, ಪಕ್ಷ ಅಲ್ಲ..
ನಟ ರವಿಚಂದ್ರನ್ಇವರೆಗೂ ರಾಜಕೀಯದಲ್ಲಿ ಗುರುತಿಸಿಕೊಂಡಿಲ್ಲ. ಈ ಹಿಂದೆಯೇ ಕೆಲವು ರಾಜಕೀಯ ಪಕ್ಷಗಳಿಂದ ಅವರಿಗೆ ಬುಲಾವ್ಬಂದರೂ, ಅವರಿಂದ ಗ್ರೀನ್ಸಿಗ್ನಲ್ಸಿಗಲಿಲ್ಲ. ಅದರಂತೆ, ರವಿಚಂದ್ರನ್ ಪ್ರಕಾರ ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯವಂತೆ. “ನಾನು ಪ್ರಚಾರಕ್ಕೆ ಹೋಗುತ್ತೇನೆ. ಆದರೆ, ಯಾವ ಪಕ್ಷಗಳ ಜತೆಗೂ ನಾನು ಗುರುತಿಸಿಕೊಳ್ಳುವುದಿಲ್ಲ. ಏಕೆಂದರೆ, ಒಂದು ರೀತಿ ನನ್ನದು ಕಾಮನ್ಪಾರ್ಟಿ. ಪಕ್ಷದ ಪ್ರಚಾರದ ಬದಲು, ವ್ಯಕ್ತಿಯ ಪರವಾಗಿ ಪ್ರಚಾರ ಮಾಡುವೆ” ಎಂದಿದ್ದಾರೆ ನಟ ರವಿಚಂದ್ರನ್.