i
ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಪತ್ರಿಕೆ ಛಾಯಾಗ್ರಾಹಕ ಅನೂಪ್ ಅವರ ತಾಯಿ ಆಲೂರಿನ ಲಲಿತಮ್ಮ ಇನ್ನಿಲ್ಲ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕು ಆಲೂರಿನ ಖ್ಯಾತ ಅಂತರ ರಾಷ್ಟ್ರೀಯ ಹಾಗೂ ಸಿನೆಮಾ ಛಾಯಾಗ್ರಾಹಕ ಎಸ್.ತಿಪ್ಪೇಸ್ವಾಮಿ ಅವರ ಪತ್ನಿ ಹಾಗೂ ಮೈಸೂರಿನ ಮಹಾರಾಣಿ ಮಹಿಳಾ ಕಾಲೇಜಿನ ರೇಖಾಚಿತ್ರ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ್ದ
ಎ.ಯು.ಲಲಿತಮ್ಮ ತಿಪ್ಪೇಸ್ವಾಮಿ(75) ಗುರುವಾರ ತಡ ರಾತ್ರಿ 11:45ಕ್ಕೆ ನಿಧನರಾಗಿದ್ದಾರೆ.
ಮೃತರು ಹಾಲಿ ಮೈಸೂರಿನಲ್ಲಿ ವಾಸ ಇದ್ದು ಮೃತರಿಗೆ ಇಬ್ಬರು ಪುತ್ರರಿದ್ದಾರೆ.
ಹಿರಿಯ ಪುತ್ರ ಅರುಣ್ ಟಿ ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿದ್ದಾರೆ. ಕಿರಿಯ ಪುತ್ರ ಅನೂಪ್ ಟಿ ರಾಘ್ ಅವರು ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಲ್ಲದೆ ಖ್ಯಾತ ಅಂತರ ರಾಷ್ಟ್ರೀಯ ಹಾಗೂ ಸಿನೆಮಾ ಛಾಯಾಗ್ರಾಹಕ ಎಸ್.ತಿಪ್ಪೇಸ್ವಾಮಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಪ್ರಮಾಣದ ಬಂಧು ಮಿತ್ರರನ್ನು ಮೃತರು ಅಗಲಿದ್ದಾರೆ.
ಅಂತ್ಯ ಸಂಸ್ಕಾರ- ಮೃತರ ಅಂತ್ಯ ಸಂಸ್ಕಾರವು ಮೈಸೂರಿನ ಕನ್ನೇಗೌಡ ಕೊಪ್ಪಲಿನ ವಿದ್ಯುತ್ ಚಿತಾಗಾರದಲ್ಲಿ ಮಾರ್ಚ್-29ರಂದು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ನೆರವೇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.