i
ಬಿರುಸಿನ ಪ್ರಚಾರ ಆರಂಭಿಸಿದ ಅಭ್ಯರ್ಥಿ ಸುಜಾತ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಎಸ್ ಯುಸಿಐ-ಸಿ ಪಕ್ಷದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಜಾತ ಡಿ ಅವರು ಮತದಾರರನ್ನು ಸಾರ್ವಜನಿಕರನ್ನು ಭೇಟಿ ಮಾಡಿ ಬೆಂಬಲಿಸುವಂತೆ ಮನವಿ ಮಾಡಿದರು.ಚಿತ್ರದುರ್ಗ ಲೋಕಸಭಾ(ಎಸ್ಸಿ) ಕ್ಷೇತ್ರದ ಸೋಷಿಯಾಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ- ಕಮ್ಯುನಿಸ್ಟ್ (ಎಸ್ ಯುಸಿಐ-ಸಿ) ಪಕ್ಷದ ಅಭ್ಯರ್ಥಿ ಸುಜಾತ ಡಿ ಅವರು ಭಾನುವಾರ ಪಕ್ಷದ ಬೆಂಬಲಿಗರನ್ನು ಹಾಗೂ ಸ್ನೇಹಿತರನ್ನು ಭೇಟಿ ಮಾಡಿ ಮತಯಾಚಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನಡೆಯ ಬಗ್ಗೆ ವಿವರಿಸುತ್ತಾ, ಜನರ ಜ್ವಾಲಂತ ಸಮಸ್ಯೆಗಳನ್ನು ಚರ್ಚಿಸುತ್ತಾ ಬೆಂಬಲ ಕೋರಿದರು.