![](https://www.chandravallinews.com/wp-content/uploads/2024/03/e7a73897-c7b6-46be-b9f7-23b884f580d1.jpg)
i
ರಕ್ಷಾ ರಾಮಯ್ಯ ಸಂಸದರಾದರೆ ಕ್ಷೇತ್ರಕ್ಕೆ ಶ್ರೀರಕ್ಷೆ-ಚಂದ್ರಮೋಹನ್…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ರಕ್ಷರಾಮಯ್ಯನವರಿಗೆ ಸಿಕ್ಕಿರುವುದು ಯುವ ಮುಖಂಡರಲ್ಲಿ ಹುಮ್ಮಸ್ಸು ಮೂಡಿಸಿದೆ, ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರ ಲೋಕಸಭಾ ಸಂಸದರಾಗಿ ಆಯ್ಕೆಯಾದ್ದಲ್ಲಿ, ಕ್ಷೇತ್ರಕ್ಕೆ ಶ್ರೀರಕ್ಷೆಯಂತೆ ನಿಂತು ಕೆಲಸ ಮಾಡಲಿದ್ದಾರೆ ಎಂದು ನಗರಸಭಾ ಸದಸ್ಯರಾದ ಚಂದ್ರಮೋಹನ್ ತಿಳಿಸಿದರು.
ಯುವ ಮುಖಂಡರಾದ ರಕ್ಷಾ ರಾಮಯ್ಯರವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿರುವುದು ಯುವಕರ ಖುಷಿಗೆ ಕಾರಣವಾಗಿದೆ, ನಿನ್ನೆ ರಾತ್ರಿ ಟಿಕೆಟ್ ಘೋಷಣೆಯಾಗುತ್ತಲೇ, ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯ ಬಯಲು ಬಸವಣ್ಣ ದೇವಸ್ಥಾನದ ಬಳಿ ಪಟಾಕಿ ಹೊಡೆದು ಯುವಕರು ಸಂಭ್ರಮಿಸಿದರು. ಇದೇ ವೇಳೆ ಮಾತನಾಡಿದ ಕರೇನಹಳ್ಳಿ ವಾರ್ಡ್ ನಗರಸಭಾ ಸದಸ್ಯರಾದ ಚಂದ್ರಮೋಹನ್ ಕಾಂಗ್ರೆಸ್ ಹೈಕಮಾಂಡ್ ಯುವಕರಿಗೆ ಆದ್ಯತೆಯನ್ನ ನೀಡಲು ರಕ್ಷಾ ರಾಮಯ್ಯನವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ,
ಚುನಾವಣೆಗೂ ಎರಡು ತಿಂಗಳ ಮುಂಚೆಯೇ ರಕ್ಷಾ ರಾಮಯ್ಯ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ನಡೆಸಿದ್ದಾರೆ, ಉದ್ಯೋಗ ಮೇಳೆ ಮತ್ತು ಆರೋಗ್ಯ ಮೇಳನ್ನ ನಡೆಸುವ ಮೂಲರ ಜನರಿಗೆ ಹತ್ತಿರವಾಗಿದ್ದಾರೆ. ರಾಜಕೀಯ ಹಿನ್ನಲೆ ಕುಟುಂಬದಿಂದ ಬಂದಿರುವ ಅವರು ಸಮಾಜಸೇವೆ ಮಾಡುವುದು ಅವರಿಗೆ ರಕ್ತದಲ್ಲೇ ಬಂದಿದೆ, ಈಗಾಗಲೇ ಅವರ ಕುಟುಂಬ ಬಹಳ ವರ್ಷಗಳಿಂದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಜನರಿಗೆ ಸೇವೆಯನ್ನ ನೀಡುತ್ತಿದೆ, ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರ ಸಂಸದರಾಗಿ ಆಯ್ಕೆಯಾದ್ದಲ್ಲಿ ಕ್ಷೇತ್ರದ ಅಭಿವೃದ್ಧಿಯಾಗಲಿದೆ, ವಿಶೇಷವಾಗಿ ದೊಡ್ಡಬಳ್ಳಾಪುರಕ್ಕೆ ಹೆಚ್ಚಿನ ಅನುದಾನ ತರುವ ಕೆಲಸವನ್ನ ಮಾಡುತ್ತಾರೆ ಎಂದರು.