![](https://www.chandravallinews.com/wp-content/uploads/2024/03/WhatsApp-Image-2024-03-31-at-8.28.57-PM-1-1024x1115.jpeg)
i
ತಾಳ್ಯದ ಟಿ.ಕೆ.ಗಂಗಾಧರಪ್ಪ ಇನ್ನಿಲ್ಲ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೀರಾವರಿ ಇಲಾಖೆ ನಿವೃತ್ತ ನೌಕರ ಹೊಳಲ್ಕೆರೆ ತಾಲೂಕು ತಾಳ್ಯದ ಟಿ.ಕೆ.ಗಂಗಾಧರಪ್ಪ(74) ಹೃದಯಾಘಾತದಿಂದ ನಿಧನರಾಗಿದ್ದಾರೆ.
ನೀರಾವರಿ ಇಲಾಖೆಯಲ್ಲಿ ಸ್ಟೋರ್ ಕೀಪರ್ ಹುದ್ದೆಯಲ್ಲಿದ್ದ ಗಂಗಾಧರಪ್ಪ, ದಾವಣಗೆರೆ, ಮಲೆಬೆನ್ನೂರು, ರಾಯಚೂರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಮೃತರು ಉದಯವಾಣಿ ಜಾಹೀರಾತು ವಿಭಾಗದ ಪ್ರತಿನಿಧಿ ಶ್ರೀನಿವಾಸ್ ಸೇರಿದಂತೆ ಪತ್ನಿ, ಸಹೋದರರು, ಬಂಧುಗಳು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಸ್ವಗ್ರಾಮ ತಾಳ್ಯದ ತೋಟದಲ್ಲಿ ಏ.1 ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.