i
ಅಪರಿಚಿತ ಶವ ಪತ್ತೆ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ತುಮಕೂರು ಟೌನ್ ಉಪ್ಪಾರಹಳ್ಳಿ, ಗುಜರಿ ಅಂಗಡಿಯ ಮುಂಭಾಗದ ಶ್ರೀ ವಿನಾಯಕ ಬ್ಯಾಂಗಲ್ಸ್ ಅಂಗಡಿಯ ಕಟ್ಟಡದ ಹಿಂಭಾಗದ ಶಿರಾಣಿ ಎಂಬುವವರಿಗೆ ಸೇರಿದ ಖಾಲಿ ಜಾಗದಲ್ಲಿ ಸುಮಾರು ೪೦ ವರ್ಷದ ಅಪರಿಚಿತ ಶವವೊಂದು ಪತ್ತೆಯಾಗಿದ್ದು, ವಾರಸುದಾರರು ತಿಳಿದು ಬಂದಿರುವುದಿಲ್ಲ.
ಮೃತನು ಐದುವರೆ ಅಡಿ ಎತ್ತರ, ಸಾಧಾರಣ ಶರೀರ, ಕೋಲು ಮುಖ, ಕಪ್ಪು ಮೈಬಣ್ಣ ಹೊಂದಿದ್ದು, ಅಲೆಮಾರಿಯಂತೆ ಪ್ಲಾಸ್ಟಿಕ್ ಮಾರುವವನಾಗಿರುತ್ತಾನೆ. ಮೃತನ ಮೈಮೇಲೆ ಕೆಂಪು ಬಣ್ಣದ ಕಪ್ಪು ಗೆರೆಗಳುಳ್ಳ ತುಂಬು ತೋಳಿನ ಶರ್ಟ್ ಮತ್ತು ಕಡು ನೀಲಿ ಬಣ್ಣದ ಪ್ಯಾಂಟ್ ಇರುತ್ತದೆ.
ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಕೂಡಲೇ ದೂ.ವಾ.ಸಂ. ೦೮೧೬-೨೨೭೮೦೦೦ ಅಥವಾ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.