i
ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಪ್ರಸನ್ನ ಕುಮಾರ್ ನೇಮಕ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರನ್ನಾಗಿ ಮಾಜಿ ಎಂ ಎಲ್ಸಿ ಆರ್ ಪ್ರಸನ್ನ ಕುಮಾರ್ ಅವರನ್ನುನೇಮಕಗೊಳಿಸಿ ಎಐಸಿಸಿ ಇಂದು ಸಂಜೆ ಆದೇಶ ಹೊರಡಿಸಿದೆ.
ಹಲವು ದಿನಗಳ ಹಿಂದೆಯೇ ಮಾಧ್ಯಮಗಳಲ್ಲಿ ಇವರ ಆಯ್ಕೆ ಬಗ್ಗೆ ವರದಿಯಾಗಿತ್ತು. ಹಾಲಿ ಅಧ್ಯಕ್ಷ ಎಚ್ ಎಸ್ ಸುಂದರೇಶ 5 ವರ್ಷದಿಂದ ಅಧ್ಯಕ್ಷರಾಗಿದ್ದರು.
ಅವರನ್ನು ಸೂಡಾ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇದರಿಂದ ಒಂದು ಹುದ್ದೆಯನ್ನು ಬಿಡಬೇಕಾಗಿತ್ತು. ಪ್ರಸನ್ನ ಕುಮಾರ್ ಈ ಹಿಂದೊಮ್ಮೆ ಅಧ್ಯಕ್ಷರಾಗಿದ್ದರು.