i
ಎಲ್ಲರ ಪ್ರೀತಿ ವಿಶ್ವಾಸ ಗಳಿಸುತ್ತಿರುವ ಬಿಜೆಪಿ ಅಭ್ಯರ್ಥಿ ಗೋವಿಂದ್ ಕಾರಜೋಳ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ 500 ಕಿಲೋ ಮೀಟರ್ ನಿಂದ ಬಂದು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಉಪಮುಖ್ಯಮಂತ್ರಿ, ದಲಿತ ನಾಯಕ ಗೋವಿಂದ್ ಕಾರಜೋಳ ಅವರು ಕೋಟೆ ನಾಡಿನ ಜನರ ಪ್ರೀತಿ ವಿಶ್ವಾಸ ಗಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಗೋವಿಂದ್ ಕಾರಜೋಳರವರು ಶುಕ್ರವಾರ ಬೆಳ್ಳಂಬೆಳಿಗ್ಗೆ ಸಿಟಿ ರೌಂಡ್ಸ್ ಮಾಡಿ ನಗರದ ಸಮಸ್ಯೆಗಳನ್ನು ಆಲಿಸುವ ಕಾರ್ಯ ಮಾಡಿದರು. ಅಲ್ಲದೆ ನಗರದ ಸ್ಟೇಡಿಯಂ ರಸ್ತೆ, ಬುದ್ದ ನಗರ, ಮಾಸ್ತಮ್ಮ ಲೇ ಔಟ್, ಜೋಗಿಮಟ್ಟಿ ರಸ್ತೆ ಸೇರಿದಂತೆ ಮತ್ತಿತರ ಸ್ಥಳಗಳಲ್ಲಿ ಸಂಚರಿಸುವ ವಾಯು ವಿಹಾರಿಗಳು, ತರಕಾರಿ ವ್ಯಾಪರಸ್ಥರು, ಹೂ ಮಾರುವವರು ಸೇರಿದಂತೆ ಎಲ್ಲ ರೀತಿಯ ವರ್ಗದವನ್ನು ಮಾತನಾಡಿಸಿ ಕ್ಷೇಮ ಸಮಚಾರ ವಿಚಾರಿಸಿ ಬಿಜೆಪಿ ಗೆಲ್ಲಿಸಿ 3ನೇ ಬಾರಿಗೆ ಮೋದಿ ಅವರನ್ನ ಪ್ರಧಾನ ಮಂತ್ರಿ ಮಾಡುವಂತೆ ಕಳಕಳಿಯಿಂದ ಕೈ ಮುಗಿದು ಕೋರಿಕೊಂಡರು.
ಇದಾದ ನಂತರ ಹೋಟೆಲ್ ಗಳಿಗೆ ಭೇಟಿ ಮಾಡಿ ಚಹಾ ಸೇವನೆ ಮಾಡಿ ಹೋಟೆಲ್ ಮಾಲೀಕರುಗಳು, ಕಾರ್ಮಿಕರ ಕಷ್ಟ ಸುಃಖ ಆಲಿಸುವುದರ ಮೂಲಕ ಮತಯಾಚನೆ ಮಾಡಿ ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಕೆ ಎಸ್ ನವೀನ್, ಚುನಾವಣಾ ಉಸ್ತುವಾರಿ ಎಸ್ ಲಿಂಗಮೂರ್ತಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್, ಬಿಜೆಪಿ ವಕ್ತಾರರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಆದರ್ಶ ಸೇರಿದಂತೆ ಬಡಾವಾಣೆ ನಿವಾಸಿಗಳು ಉಪಸ್ಥಿತರಿದ್ದು ನಗೆ ಬೀರಿ ಕೈ ಕುಲಕಿ ಮತ ನೀಡುವ ಭರವಸೆ ನೀಡಿದರು.