i
ಗ್ರಾಮ ಮಟ್ಟದಲ್ಲಿ ಕಾರ್ಮಿಕರನ್ನು ಗುರುತಿಸಿ ಸೌಲಭ್ಯ ಕಲ್ಪಿಸಿ: ಕಾರ್ಮಿಕರ ಒಕ್ಕೂಟ ಆಗ್ರಹ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ನಕಲಿ ಕಾರ್ಮಿಕ ಕಾರ್ಡನ್ನು ತಡೆಯಲು ಕ್ರಮ ಜರುಗಿಸಬೇಕು. ಕಾರ್ಮಿಕ ಮಕ್ಕಳಿಗೆ ಸ್ಕಾಲರ್ಶಿಪ್ ಬರುವಂತೆ ಮಾಡÀಬೇಕು. ನಿಜವಾದ ಕಾರ್ಮಿಕರನ್ನು ಮಾತ್ರ ಕಾರ್ಮಿಕರ ಪಟ್ಟಿಗೆ ಸೇರಿಸಬೇಕು. ಕಾರ್ಮಿಕರನ್ನು ಹೋಬಳಿ, ಗ್ರಾಮಮಟ್ಟದಲ್ಲಿ ಗುರುತಿಸಿ ಅಂತಹವರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕೆಂದು ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟ ಆಗ್ರಹಿಸಿದೆ.
ಸೋಮವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ. ಸಂಜಯ್ ಕುಮಾರ್, ಜಿಲ್ಲಾ ಕಟ್ಟಡ ಕಾರ್ಮಿಕರ ಸಮಿತಿಯನ್ನು ಪುರ್ರಚಿಸಲಾಗಿದೆ. ಗೌರವಾಧ್ಯಕ್ಷರಾಗಿ ಮಹದೇವಾಚಾರ್ ಮೇಸ್ತಿç, ಉಪಾಧ್ಯಕ್ಷರಾಗಿ ಪ್ರಭು ಮೇಸ್ತಿç, ವೆಂಕಟೇಶ್ ಮೇಸ್ತಿç, ಕಾರ್ಯದರ್ಶಿಯಾಗಿ ಆರ್ಮುಗಂ ಮತ್ತು ಹಬೀಬ್, ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ್ ಹುಣಸವಳ್ಳಿ, ಎನ್. ಕುಮಾರ್, ಬಸವರಾಜ್ ನೇಮಕವಾಗಿದ್ದಾರೆ ಎಂದರು.
ಇದರAತೆ ಪ್ರತಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು ೧೫ ಸಾವಿರದಷ್ಟು ಕಟ್ಟಡ ಕಾರ್ಮಿಕರಿದ್ದಾರೆ. ಇವರಲ್ಲಿ ಪ್ಲಂಬರ್, ಪೇಂಟರ್, ಕಾರ್ಪೆಂಟರ್, ಎಲೆಕ್ಟಿçಕಲ್ ವಕರ್ಸ್, ಬಾರ್ ಬೆಂರ್ಸ್, ಟೈಲ್ಸ್ ವಕರ್ಸ್, ಫ್ಯಾಬ್ರಿಕೇರ್ಸ್, ಕಾಂಕ್ರೀಟ್ ವಕರ್ಸ್ ಮೊದಲಾದವರು ಸೇರಿದ್ದಾರೆ ಎಂದರು.