i
ಈಶ್ವರಪ್ಪ ಬಗ್ಗೆ ಏನೂ ಮಾತಾಡೊಲ್ಲ: ಬಿಎಸ್ ವೈ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಡಿಸಿಎಂ ಕೆಎಸ್ಈಶ್ವರಪ್ಪನವರ ಸ್ಪರ್ಧೆ ನಿಕ್ಕಿಯಾಗಿದೆ. ಈ ಸಂಬಂಧ ಇವತ್ತು ಸುದ್ದಿಗೋಷ್ಟಿಯಲ್ಲಿಯು ಮಾತನಾಡಿದ ಅವರು ನಾಳೆ ನಾಮಿನೇಷನ್ಗೆ ಸಿದ್ಧತೆ ಮಾಡ್ತಿರುವುದಾಗಿ ಹೇಳಿದ್ದಾರೆ. ಇದರ ನಡುವೆ ಬಿಜೆಪಿಯ ದುರೀಣ ಬಿಎಸ್ಯಡಿಯೂರಪ್ಪ ನವರ ರಿಯಾಕ್ಷನ್ಏನಿರುತ್ತೆ ಎಂದು ಕುತೂಹಲ ಮೂಡಿಸಿತ್ತು. ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾನು ಯಾವುದಕ್ಕೂ ಉತ್ತರ ಕೊಡುವುದಿಲ್ಲ ಎಂದಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬಿಎಸ್ಯಡಿಯೂರಪ್ಪನವರು ಅವರ ವಿಚಾರದಲ್ಲಿ ನಾನ್ಯಾವುದಕ್ಕೂ ಉತ್ತರ ಕೊಡುವುದಕ್ಕೆ ಇಷ್ಟಪಡುವುದಿಲ್ಲ. ಅವರ ಸ್ವಂತ ಅಪೇಕ್ಷೆ ಏನಿದೆಯೋ ಅದನ್ನವರು ಮಾಡಲಿ. ಅದ್ಯಾವುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಹಾಗೇನೆ ಕೊನೆಯದಾಗಿ ಆ ಬಗ್ಗೆ ನಾನು ಹೆಚ್ಚು ಮಾತನಾಡೋದಕ್ಕೂ ಸಹ ಇಚ್ಚೆ ಪಡೋದಿಲ್ಲ ಎಂದಿದ್ದಾರೆ.