i
ಬಣ್ಣದ ಓಕುಳಿ ಚೆಲ್ಲಿ ವಿಭಿನ್ನಾವಾಗಿ ಚಿತ್ರ ನಟರೊಂದಿಗೆ ಬೇಸಿಗೆ ಶಿಬಿರ ಆರಂಭಿಸಿದ ಆರ್ಟ್ ಯೂನಿವರ್ಸ್…
ಚಂದ್ರವಳ್ಳಿ ನ್ಯೂಸ್, ತುಮಕೂರು:
ನಗರದ ಆಲದಮರದ ಪಾರ್ಕ್ನಲ್ಲಿ ಆರ್ಟ್ ಯುನಿವರ್ಸ್, ಸ್ಕೈ ಆಡ್ಸ್ ಹಾಗೂ ಪ್ರೆಸ್ ಕ್ಲಬ್ ತುಮಕೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಬೇಸಿಗೆ ಶಿಬಿರ ಚಿಣ್ಣರು ಬಣ್ಣದ ಓಕುಳಿಯನ್ನು ಚೆಲ್ಲಿ ಶನಿವಾರ ಚಾಲನೆ ನೀಡಿದರು.
ಬದುಕಿನ ಪಯಣದಲ್ಲಿ ಬಣ್ಣದ ಪಾತ್ರ ಪ್ರಮುಖವಾದದ್ದು, ಹೀಗಾಗಿ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆಯನ್ನ ಶಿಬಿರದ ವಿದ್ಯಾರ್ಥಿಗಳು, ಪೋಷಕರು ಓಕುಳಿ ಆಡುವ ಮೂಲಕ ವಿಭಿನ್ನವಾಗಿ ನೆರವೇರಿಸಲಾಯಿತು.
ಮುಖ್ಯ ಅತಿಥಿಗಳಾದ ಚಲನಚಿತ್ರ ನಾಯಕ ನಟ ಅವಿನಾಶ್ ಶಟಮರ್ಶನ್ ಹಾಗೂ ಪೋಷಕ ನಟ ಹನುಮಂತೇ ಗೌಡ ನಿರ್ವಹಿಸಿದರು.
ಚಿತ್ರನಟ ಹನುಮಂತೇಗೌಡ ಮಾತನಾಡಿ ಬೇಸಿಗೆ ಅಂದರೆ ನೆನಪಾಗುವುದೇ ಅಜ್ಜಿ ತಾತನ ಮನೆ. ಈ ರೀತಿ ಬೇಸಿಗೆ ಶಿಬಿರಗಳು ನಮ್ಮ ಬಾಲ್ಯವನ್ನ ನೆನಪಿಸುತ್ತದೆ. ವಯಸ್ಸಾದಂತೆ ಮುಗ್ಧತೆಗಳನ್ನ ಕಳೆದುಕೊಳ್ಳುವ ಇಂದಿನ ದಿನಮಾನದಲ್ಲಿ ಈ ಬೇಸಿಗೆ ಶಿಬಿರಗಳು ಮಕ್ಕಳು ಹಾಗೂ ಪೋಷಕರಲ್ಲಿ ಕಲೆಯ ಮಹತ್ವ ಸಾರುತ್ತಿವೆ ಎಂದರು.
ನಟ ನಿರ್ದೇಶಕ ಅವಿನಾಶ್ ಶಟಮರ್ಶನ್ ಹಾಗೂ ತಂಡದವರು ವಿದ್ಯಾರ್ಥಿಗಳಿಗಾಗಿ ರಂಗ ಕಲೆ, ರಂಗ ಗೀತೆ ನೃತ್ಯ ಇವುಗಳ ತರಬೇತಿ ನೀಡಿದರು .
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ನಿಸಾರ್ ಅಹಮದ್ (ಆರಿಫ್), ಆಯೋಜಕ ಆರ್ಟ್ ಯುನಿವರ್ಸ್ನ ಚಿದಾನಂದ ಎಚ್.ಎನ್, ಸ್ಕೈ ಆಡ್ಸ್ನ ವಿಜಯ್ ಹಾಜರಿದ್ದರು.
ಕ್ಲೆಯ್ ಮಾಡಲಿಂಗ್, ಕುದುರೆ ಓಟ, ಬಾಹ್ಯಾಕಾಶ ವೀಕ್ಷಣೆ ಈ ರೀತಿಯ ಚಟುವಟಿಕೆಗಳನ್ನು ಆರ್ಟ್ ಯುನಿವರ್ಸ್ ಹಾಗೂ ಸ್ಕೈ ಆಡ್ಸ್ ಸಂಸ್ಥೆಯು ಬೇಸಿಗೆ ಶಿಬಿರದಲ್ಲಿ ಕೈಗೊಳ್ಳಲಿದ್ದು ಆಸಕ್ತರು ೮೨೧೭೫೦೬೮೪೯ ಸಂಖ್ಯೆಗೆ ನೋಂದಾಯಿಸಿಕೊಳ್ಳಬಹುದು ಎಂದು ಆಯೋಜಕರು ತಿಳಿಸಿದ್ದಾರೆ.