i
ಡಾ.ಬಿ.ಆರ್.ಅಂಬೇಡ್ಕರ್ ರವರ ಜೀವನ ಇಂದಿನ ಯುವ ಪೀಳಿಗೆಗೆ ಮಾದರಿಯಾಗಲಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಡಾ.ಬಿ. ಆರ್ ಅಂಬೇಡ್ಕರ್ ರವರು ದೇಶದ ಎಲ್ಲ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ ಹಾಗೂ ಸಂವಿಧಾನ ನೀಡಿದ ಮಹಾನಾಯಕ. ಅವರ ತತ್ವ ಸಿದ್ಧಾಂತಗಳನ್ನು ಮತ್ತು ಅವರ ಜೀವನದ ಆದರ್ಶಗಳನ್ನು ಇಂದಿನ ಯುವಕರು ವಿದ್ಯಾರ್ಥಿಗಳು ಪಾಲಿಸಬೇಕು ಎಂದು ಸಂಘದ ಅಧ್ಯಕ್ಷ ಶಿವಮೂರ್ತಿ ಟಿ ತಿಳಿಸಿದರು.
ಚಳ್ಳಕೆರೆ ತಾಲ್ಲೂಕಿನ ತಳಕು ಸಮೀಪದ ಕೋಡಿಹಳ್ಳಿ ಗ್ರಾಮದಲ್ಲಿ ಸರಳವಾಗಿ ಆಚರಿಸಲಾದ ಡಾ.ಬಿ.ಆರ್ ಅಂಬೇಡ್ಕರ್ ರವರ 133ನೇ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಜೀವನದ ಸಿದ್ದಾಂತ ಮತ್ತು ಹೋರಾಟಗಳೇ ನಮಗೆ ಮುಂದಿನ ಜೀವನದ ದಿಕ್ಸೂಚಿ ಗಳಾಗಿವೆ ಎಂದು ತಿಳಿಸಿದರು.
ನಂತರ ಎಲ್ಲರೂ ಸಂವಿಧಾನದ ಪೀಠಿಕೆಯನ್ನು ಓದಿ ಪ್ರತಿಜ್ಞೆ ಮಾಡಲಾಯಿತು.
ನಂತರ ಕೇಕ್ ಕತ್ತರಿಸಿ ಎಲ್ಲ ಮಕ್ಕಳಿಗೆ ಸಿಹಿ ಹಂಚಲಾಯಿತು. ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಅರ್ಥ ಪೂರ್ಣ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಮತ್ತು ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ತುಂಬಾ ಪರಿಣಾಮಕಾರಿಯಾಗಿ ಬೀರುತ್ತವೆ ಎಂದರೆ ತಪ್ಪಾಗಲಾರದು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಾದ ಸಣ್ಣ ನಾಗಯ್ಯ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಹೆಚ್ ತಿಪ್ಪೇಸ್ವಾಮಿ, ಮಂಜುನಾಥ್, ಹನುಮಂತಪ್ಪ, ನಿಂಗಣ್ಣ,ಮೀಸೆ ಬಸಯ್ಯ, ದೊಡ್ಡ ದುರುಗಣ್ಣ, ತಿಪ್ಪೇಸ್ವಾಮಿ, ಗಂಗಣ್ಣ, ಪುಟ್ಟಣ್ಣ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಯ್ಯ, ತಿಪ್ಪೇಸ್ವಾಮಿ.ಪಿ, ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನಯ್ಯ.ಟಿ, ಲಿಂಗರಾಜ್.ಡಿ, ಧನಂಜಯ್, ಕುಮಾರ ಸ್ವಾಮಿ,ರುದ್ರಮುನಿ, ಎಂ.ಟಿ ಮಂಜುನಾಥ್, ದುರುಗೆಶ್, ಮೈಲಾರಿ ಮಾರಣ್ಣ, ಚಿದಾನಂದ್, ರವಿಕುಮಾರ್.ಜಿ, ರಾಜು ವಿಜಯ್.ಎಸ್, ಸುರೇಶ್ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯದರ್ಶಿ ಶ್ರೀಧರ್.ಎಚ್, ಖಜಾಂಚಿ ರಾಜು.ಡಿ ಮನೋಜ್ ಕುಮಾರ್, ದಯಾನಂದ್, ತಿಪ್ಪೇಸ್ವಾಮಿ.ಯು, ಅಭಿಷೇಕ್ ವಿಜಯ್ ಕುಮಾರ್.ಡಿ, ಅರುಣ್ ಕುಮಾರ್, ರಮೇಶ್.ಎಂ ಮಲ್ಲಿಕಾರ್ಜುನ್, ಗೋಪಿ, ಕೊಲ್ಲಾರಿ, ಕೋಟಿ, ಮಹೇಶ್.ಜಿ, ಸ್ವಾಮಿ, ನಿಂಗರಾಜು, ಪರಶುರಾಮ್. ಓ ಮಂಜು, ಮೋಹನ್, ಉಪೇಂದ್ರ, ಶಿವಪ್ಪ, ನಂದೀಶ್, ಜಯಂತ್ ಗುರುಮೂರ್ತಿ, ತಿಪ್ಪೇಶ್, ನಿಂಗೇಶ್, ಡ್ಯಾನ್ಸರ್ ಮೈಕಲ್ ವೆಂಕಿ, ನಾಗೇಶ್, ಕಿರಣ್, ಕಣುಮೇಶ್ ಉಪಸ್ಥಿತರಿದ್ದರು.