i
‘ಮೋದಿ ಅಲೆ ಇಲ್ಲ, ಭ್ರಮೆಯಲ್ಲಿರಬೇಡಿ’– ನವನೀತ್ ರಾಣಾ…
ಚಂದ್ರವಳ್ಳಿ ನ್ಯೂಸ್, ಮುಂಬಯಿ:
ಲೋಕಸಭೆ ಚುನಾವಣೆ ವೇಳೆ ಯಾವುದೇ ಮೋದಿ ಅಲೆ ಇಲ್ಲ ಎಂದು ಪ್ರತಿಪಕ್ಷಗಳ ನಾಯಕರು ಹಲವು ಬಾರಿ ಹೇಳಿದ್ದರು, ಇದೀಗ ಅಮರಾವತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನವನೀತ್ ರಾಣಾ ಅವರು ದೇಶದಲ್ಲಿ ‘ಮೋದಿ ಅಲೆ ಇಲ್ಲ, ಮೋದಿ ಅಲೆ ಇದೆ ಎಂಬ ಭ್ರಮೆಯಲ್ಲಿರಬೇಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಹೇಳಿರುವ ವಿಡಿಯೋ ವೈರಲ್ಆಗಿದೆ.
ಬಿಜೆಪಿ ಅಭ್ಯರ್ಥಿ ನವನೀತ್ ರಾಣಾ ತಮ್ಮ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಈಗ ಮೋದಿ ಅಲೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಸಭೆಗೆ ಮಾಧ್ಯಮದವರಿಗೆ ಅವಕಾಶ ನೀಡಿರಲಿಲ್ಲ. ಆದರೆ ಆಕೆ ಹೇಳಿಕೆ ನೀಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ನಾವು ಈ ಚುನಾವಣೆಯನ್ನು ಗ್ರಾಮ ಪಂಚಾಯಿತಿ ಚುನಾವಣೆಯಂತೆ ಎದುರಿಸಬೇಕಾಗುತ್ತದೆ. ಮಧ್ಯಾಹ್ನದ ವೇಳೆಗೆ ಎಲ್ಲ ಮತದಾರರನ್ನು ಬೂತ್ಗೆ ಕರೆತಂದು ಮತ ಹಾಕುವಂತೆ ಹೇಳಬೇಕು. ಮೋದಿ ಅಲೆ ಇದೆ ಎಂಬ ಭ್ರಮೆಯಲ್ಲಿ ಉಳಿಯಬೇಡಿ. ಕಳೆದ ಚುನಾವಣೆಯಲ್ಲಿ, ಮೋದಿ ಅಲೆಯ ನಡುವೆಯೂ, ನಾನು ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದೇನೆ ಎಂದು ನವನೀತ್ ರಾಣಾ ಅವರು ಹೇಳಿದ್ದಾರೆ.
ನವನೀತ್ ರಾಣಾ 2019ರಲ್ಲಿ ಎನ್ಸಿಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಅಮರಾವತಿಯಿಂದ ಕಣಕ್ಕಿಳಿದು ಗೆಲುವನ್ನು ಸಾಧಿಸಿದ್ದರು. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.