i
ಮುಖ್ಯಮಂತ್ರಿಗಳ ರೋಡ್ ಶೋ ಫ್ಲಾಪ್ ಶೋ. ಯಶಸ್ವಿಯಾಗದ ರೋಡ್ ಶೋ…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಿಎಂ ಸಿದ್ದರಾಮಯ್ಯ ರಾಜ್ಯವಷ್ಟೇ ಅಲ್ಲ ದೇಶದ ಮಾಸ್ ಲೀಡರ್ ಗಳಲ್ಲಿ ಒಬ್ಬರು, ಅವರೊಂದು ಸ್ಥಳಕ್ಕೆ ಭೇಟಿ ನೀಡುತ್ತಾರೆಂದ್ದಾರೆ ಅವರ ಸಾವಿರಾರು ಅಭಿಮಾನಿಗಳು ಜಮಾಯಿಸುತ್ತಾರೆ, ದೊಡ್ಡಬಳ್ಳಾಪುರದಲ್ಲಿ ನಿನ್ನೆ ಸಿಎಂ ಸಿದ್ದರಾಮಯ್ಯನವರ ರೋಡ್ ಶೋ ಅಯೋಜನೆ ಮಾಡಲಾಗಿತ್ತು, ಆದರೆ ನಿರೀಕ್ಷಿಸದಷ್ಟು ಜನರು ಸೇರಿರಲಿಲ್ಲ, ಸ್ಥಳೀಯ ಕಾಂಗ್ರೆಸ್ ಮುಖಂಡರು ಜನರನ್ನ ಸೇರಿಸುವಲ್ಲಿ ವಿಫಲರಾದ ಹಿನ್ನಲೆ ರೋಡ್ ಶೋ ಒಂದು ರೀತಿಯಲ್ಲಿ ನಿರಸವಾಗಿತ್ತು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷಾ ರಾಮಯ್ಯ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ನಡೆಸಿದರು, ಮೊದಲಿಗೆ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು ಕೊನೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಮುಖ್ಯಮಂತ್ರಿಗಳ ರೋಡ್ ಶೋ ಆಯೋಜನೆ ಮಾಡಲಾಗಿತ್ತು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರೋಡ್ ಶೋಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿತು, ತೆರೆದ ವಾಹನದಲ್ಲಿ ಅವರು ಜನರತ್ತ ಕೈಬೀಸಿ ತಮ್ಮ ಅಭಿಮಾನಿಗಳಲ್ಲಿ ರೋಮಾಂಚನವನ್ನುಂಟು ಮಾಡಿದರು.
ದೊಡ್ಡಬಳ್ಳಾಪುರದಲ್ಲಿ ಸಂಜೆ 5 ಗಂಟೆ ಮುಖ್ಯಮಂತ್ರಿಗಳ ರೋಡ್ ಶೋಗೆ ಸಮಯ ನಿಗದಿ ಮಾಡಲಾಗಿತ್ತು, ಆದರೆ ದೊಡ್ಡಬಳ್ಳಾಪುರಕ್ಕೆ ಬರುವಷ್ಟರಲ್ಲಿ ಎರಡು ತಾಸು ತಡವಾಗಿತ್ತು, ಬಸವ ಭವನದಿಂದ ಮೇಘಾಂಜಲಿ ಕಲ್ಯಾಣ ಮಂಟಪದವರೆಗೂ ರೋಡ್ ಶೋ ಮಾಡುವ ತಿರ್ಮಾನ ಮಾಡಲಾಗಿತ್ತು, ಆದರೆ ನಿರೀಕ್ಷೆ ಮಾಡಿದಷ್ಟು ಜನರು ಸೇರದ ಹಿನ್ನಲೆ ಮತ್ತು ಜನರ ಕಡಿಮೆ ಇದ್ದ ಕಾರಣಕ್ಕೆ ಬಯಲು ಬಸವಣ್ಣ ದೇವಸ್ಥಾನದ ಬಳಿ ರೋಡ್ ಶೋ ಮುಗಿಸಲಾಗಿತು. ದೊಡ್ಡಬಳ್ಳಾಪುರದಲ್ಲಿನ ಮುಖ್ಯಮಂತ್ರಿಗಳ ರೋಡ್ ಶೋಗೆ ನೀರಿಕ್ಷೆ ಮಾಡಿದಷ್ಟು ಜನರು ಸೇರದ ಹಿನ್ನಲೆ ಬಸವ ಭವನದಲ್ಲಿ ಬಸ್ ನಲ್ಲಿಯೇ ಜನರತ್ತ ಕೈ ಬಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ಬಸ್ ಒಳಗೆ ಕುಳಿತು ಬಿಟ್ಟರು.
ರೋಡ್ ಶೋ ನಲ್ಲಿ ರಕ್ಷಾ ರಾಮಯ್ಯ, ಸಚಿವರಾದ ಕೆ.ಹೆಚ್.ಮುನಿಯಪ್ಪ, ಮಾಜಿ ಶಾಸಕರಾದ ಟಿ.ವೆಂಕಟರಮಣಯ್ಯ, ಒಮ್ಮೆ ಮಾತ್ರ ಸಚಿವರಾದ ಕೃಷ್ಣಬೈರೇಗೌಡರು ಕಾಣಿಸಿಕೊಂಡು ಭಾಷಣ ಮುಗಿದ ನಂತರ ಅವರು ಬಸ್ ಒಳಗೆ ಕುಳಿತು ಬಿಟ್ಟರು, ಬಯಲು ಬಸವಣ್ಣ ದೇವಸ್ಥಾನದ ಬಳಿ ಬಸ್ ಬಂದಾಗ ಮತ್ತೊಮ್ಮೆ ಕಾಣಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರನ್ನ ಉದ್ದೇಶಿ ಭಾಷಣ ಮಾಡಿದರು.
ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ ಮುಖ್ಯಮಂತ್ರಿಗಳ ರೋಡ್ ಶೋಗೆ ಸಿಕ್ಕಷ್ಟು ಜನಸ್ಪಂದನೆ ಮತ್ತು ಜನದಟ್ಟನೆ ದೊಡ್ಡಬಳ್ಳಾಪುರದಲ್ಲಿ ಇರಲಿಲ್ಲ, ದೊಡ್ಡಬಳ್ಳಾಪುರದ ಸ್ಥಳೀಯ ಕಾಂಗ್ರೆಸ್ ಮುಖಂಡರು ಜನರನ್ನ ಸೇರಿಸುವಲ್ಲಿ ಉತ್ಸಾಹ ತೋರಿಸದ ಹಿನ್ನಲೆ ಮತ್ತು ರೋಡ್ ಶೋ ತಡವಾಗಿ ಪ್ರಾರಂಭವಾಗಿದ್ದಕ್ಕೆ ನಿರೀಕ್ಷೆ ಮಾಡಿದಷ್ಟು ಜನರು ಸೇರಲಿಲ್ಲ.