i
ಭೂಸ್ವಾಧೀನ ಪ್ರಕ್ರಿಯೆ ಪರಿಹಾರ ನೀಡಲು ವಿರೋಧವಿಲ್ಲ: ರಮೇಶ್ ರೇವಣ್ಕರ್…
ಚಂದ್ರವಳ್ಳಿ ನ್ಯೂಸ್, ಭದ್ರಾವತಿ:
ನಗರದ ನದಿಯ ಹಳೇ ಸೇತುವೆಗೆ ಪರ್ಯಾಯ ಹೊಸ ಹೊಸ ಸೇತುವೆ ನಿರ್ಮಾಣಕ್ಕಾಗಿ ಅಧಿಕಾರಿಗಳು ಮೂಲ ನಕ್ಷೆಯಂತೆ ಕಟ್ಟಡ ತೆರವು ಮಾಡಲು ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಮಾನದಂಡ ಎಲ್ಲರಿಗೂ ಒಂದೇ ಆಗಿರುವಾಗ ಭೂಸ್ವಾಧೀನ ಪ್ರಕ್ರಿಯೆ ಸರಿಯಾಗಿ ನಿರ್ವಹಿಸಿ ಸೂಕ್ತ ಪರಿಹಾರ ನೀಡಲಿ ಎಂದು ದತ್ತಾರಾಂ ವಾಣಿಜ್ಯ ಸಂಕೀರ್ಣ ಮಾಲೀಕ ರಮೇಶ್ ರೇವಣ್ಕರ್ ಹೇಳಿದರು.
ಅವರು ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿ ಕೆಆರ್ಡಿಸಿಎಲ್ ಕೈಗೆತ್ತಿಕೊಂಡಿರುವ ಸೇತುವೆ ಕಾಮಗಾರಿ ಕಳೆದ ಏಳೆಂಟು ವರ್ಷಗಳಿಂದ ನಡೆಯುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ ಕಾನೂನು ಬದ್ದವಾಗಿ ಮಾಡಿಲ್ಲ. ನಮಗೆ ಒಮ್ಮೆಯೂ ಒಂದು ನೋಟೀಸಾಗಲಿ ಪತ್ರ ವ್ಯವಹಾರವಾಗಲಿ ಮಾಡಿಲ್ಲ. ಮನಬಂದಂತೆ ಅಧಿಕಾರಿಗಳು ನಡೆದುಕೊಂಡಿದ್ದಾರೆ.
ಒಬ್ಬರಿಗೊಂದು ಮತ್ತೊಬ್ಬರಿಗೊಂದು ಪರಿಹಾರ ನೀಡಿದ್ದಾರೆ. ಅಧಿಕಾರಿಗಳು ಮೂಲ ನಕ್ಷೆಯಂತೆ ಕಾಮಗಾರಿ ಮಾಡಿಲ್ಲ. ಮಾರ್ಕಿಂಗ್ ಪ್ರಕಾರ ಕಟ್ಟಡಗಳ ತೆರವು ಮಾಡದೆ ಅವೈಜ್ಞಾನಿಕವಾಗಿದೆ. ಮೂಲ ನಕ್ಷೆಯನ್ನೇ ಬದಲಾಯಿಸಿದ್ದಾರೆ. ಹೊಸದಾಗಿ ನಕ್ಷೆ ತಯಾರಿಸಿ ಜಿಗ್ಜ್ಯಾಗ್ ಅಂಕುಡೊಂಕಾಗಿ ರಾತ್ರೋರಾತ್ರಿ ಕಳ್ಳರಂತೆ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ. ಹಲವು ಬಾರಿ ನಗರಸಭೆಯ ಸದಸ್ಯರು ಸೇರಿದಂತೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆಂದರು.