i
ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಡಿಒ ಲೋಕಾಯುಕ್ತ ಬಲೆಗೆ…
ಚಂದ್ರವಳ್ಳಿ ನ್ಯೂಸ್, ಕೊರಟಗೆರೆ:
ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಡಿಒ ಅವರು ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ ಜೈಲಿಗೆ ಕಳುಹಿಸಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿ ಜರುಗಿದೆ.
ಸಿಂಗರಹಳ್ಳಿ ಗ್ರಾಮದ ಆರ್.ನಾಗೇಶ್ ರವರ ತಮ್ಮ ಸೋಮಶೇಖರ್ ರವರಿಗೆ ಅಡಿಕೆ ಹಾಳೆ ತಟ್ಟೆ ತಯಾರಿಕಾ ಘಟಕಕ್ಕೆ ಎನ್.ಓ.ಸಿ ನೀಡಲು ಎಲೆರಾಂಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಶೇಖರ್ ಮತ್ತು ಪಿ.ಡಿ.ಓ ಕಿಶೋರ್ ಲಾಲ್ಸಿಂಗ್ ನಾಯ್ಕ್ ರವರುಗಳು ೨೦,೦೦೦ ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು ದೂರುದಾರ ಆರ್.ನಾಗೇಶ್ ರವರು ಲಂಚ ಕೊಡಲು ಇಷ್ಟವಿಲ್ಲದೇ ತುಮಕೂರು ಲೋಕಾಯುಕ್ತರಿಗೆ ದೂರು ನೀಡಿದ್ದರು.
ಪೊಲೀಸ್ ಇನ್ಸ್ಪೆಕ್ಟರ್ ಬಿ.ಮೊಹಮ್ಮದ್ ಸಲೀಂ ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮದಡಿ ಪ್ರಕರಣ ದಾಖಲಿಸಿಕೊಂಡು, ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದರು.
ದೂರುದಾರರ ಮಾವ ತಿಮ್ಮಪ್ಪ ರವರಿಂದ ಎಲೆರಾಂಪುರ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಆರೋಪಿತರಾದ ಎಲೆರಾಂಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಶೇಖರ್ ರವರು ೨೦,೦೦೦ ರೂ ಲಂಚದ ಹಣವನ್ನು ಸ್ವೀಕರಿಸಿರುತ್ತಾರೆ. ಈ ವೇಳೆ ಲೋಕಾಯುಕ್ತ ಪೊಲೀಸರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಶೇಖರ್ ಮತ್ತು ಪಿ.ಡಿ.ಓ ಕಿಶೋರ್ ಲಾಲ್ಸಿಂಗ್ ನಾಯ್ಕ್ ರವರುಗಳನ್ನು ವಶಕ್ಕೆ ಪಡೆದು, ತನಿಖೆ ಕೈಗೊಂಡಿರುತ್ತಾರೆ. ತುಮಕೂರು ಲೋಕಾಯುಕ್ತ ಕಛೇರಿಯ ಪೊಲೀಸ್ ಅಧೀಕ್ಷಕ ವಲಿಬಾಷಾ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರುಗಳಾದ ಕೆ.ಜಿ.ರಾಮಕೃಷ್ಣ ಮತ್ತು ಬಿ.ಉಮಾಶಂಕರ್ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಬಿ.ಮೊಹಮ್ಮದ್ ಸಲೀಂ, ಸುರೇಶ್.ಕೆ ಮತ್ತು ಶಿವರುದ್ರಪ್ಪ ಮೇಟಿ ಹಾಗೂ ಸಿಬ್ಬಂದಿಗಳಾದ ಆಲಂಪಾಷ, ಯತೀಗೌಡ, ಪ್ರಕಾಶ್, ಬಸವರಾಜು, ಮಹಾಲಿಂಗಪ್ಪ, ಸಂತೋಷ್, ಗಿರೀಶ್ಕುಮಾರ್, ನಳಿನಾಕ್ಷಿ, ರವೀಶ್, ಭಾಸ್ಕರ್.ಎಂ ಮತ್ತು ಇತರರು ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.