i
ಒಳ ಮೀಸಲಾತಿಯಿಂದ ಮಾದಿಗ ಸಮಾಜಕ್ಕೆ ಸಾಕಷ್ಟು ಅನುಕೂಲವಾಗಲಿದೆ-ಕೆ.ಎಸ್.ನವೀನ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಒಳ ಮೀಸಲಾತಿ ಜಾರಿಯಿಂದ ದೊಡ್ಡ ಸಂಖ್ಯೆಯಲ್ಲಿರುವ ಮಾದಿಗರಿಗೆ ಅನುಕೂಲವಾಗಲಿದೆ ಎನ್ನುವುದನ್ನು ಮನದಲ್ಲಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರಿಗೆ ಮತ ನೀಡಿ ಗೆಲ್ಲಿಸಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾದಿಗ ಜನಾಂಗದವರಲ್ಲಿ ಮನವಿ ಮಾಡಿದರು.
ನಗರದ ಜೆ.ಜೆ.ಹಟ್ಟಿಯಲ್ಲಿ ಬುಧವಾರ ಮತಯಾಚಿಸಿ ಮಾತನಾಡಿದ ಅವರು ಆರು ಬಾರಿ ಶಾಸಕರಾಗಿ ರಾಜ್ಯದ ಉಪಮುಖ್ಯಮಂತ್ರಿಯಾಗಿ ಸಾಕಷ್ಟು ಅನುಭವವಿರುವ ಗೋವಿಂದ ಕಾರಜೋಳರವರಿಗೆ ನಿಮ್ಮ ಅಮೂಲ್ಯವಾದಮತ ಹಾಕಿದರೆ ಕ್ಷೇತ್ರ ಅಭಿವೃದ್ದಿಯಾಗಲಿದೆ. ಕಾಂಗ್ರೆಸ್ನ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಿದರೆ ಸಂಸತ್ನಲ್ಲಿ ವಿರೋಧ ಪಕ್ಷದಲ್ಲಿಕೂರುತ್ತಾರೆ. ಹಾಗಾಗಿ ನಿಮ್ಮ ಮತ ಕಸದ ಬುಟ್ಟಿ ಸೇರಿದಂತಾಗುತ್ತದೆ. ಎಚ್ಚರಿಕೆಯಿಂದ ಮತ ಚಲಾಯಿಸಿ ಎಂದು ವಿನಂತಿಸಿದರು.ಗೋವಿಂದ ಕಾರಜೋಳರವರನ್ನು ಗೆಲ್ಲಿಸಿ ಸಂಸತ್ಗೆ ಕಳಿಸಿದರೆ ಪ್ರಧಾನಿ ಜೊತೆ ಕುಳಿತುಕೊಳ್ಳುತ್ತಾರೆ. ಕಾಂಗ್ರೆಸ್ನ ಬಿ.ಎನ್.ಚಂದ್ರಪ್ಪ ಗೆದ್ದರೆ ಯಾರ ಕೈಗೂ ಸಿಗಲ್ಲ. ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಡಿಸಬೇಕೆಂಬಉದ್ದೇಶವಿಟ್ಟುಕೊಂಡು ಗೋವಿಂದ ಕಾರಜೋಳರವರವನ್ನು ಕರೆದುಕೊಂಡು ಬಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದೇವೆ. ಕಾಂಗ್ರೆಸ್ನ ಐದು ಗ್ಯಾರೆಂಟಿಗಳು ಯಾವಾಗ ನಿಲ್ಲುತ್ತವೋ ಗೊತ್ತಿಲ್ಲ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿಯುವ ಹುನ್ನಾರ ಮಾಡುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ಯಾರೆಂಟಿಗಳಿಗೆ ಮೋಸ ಹೋಗದಿರಿ ಎಂದು ಕೆ.ಎಸ್.ನವೀನ್ ಮಾದಿಗರನ್ನು ಎಚ್ಚರಿಸಿದರು.ಒಳ ಮೀಸಲಾತಿ ನಿಮ್ಮ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಊರುಗೋಲಾಗಲಿದೆ. ಕಾಂಗ್ರೆಸ್ ಒಳ ಮೀಸಲಾತಿಯನ್ನು ವಿರೋಧಿಸುತ್ತಿದೆ ಎನ್ನುವುದು ನಿಮಗೆ ಗೊತ್ತಿರಲಿ. ಪ್ರಧಾನಿ ನರೇಂದ್ರಮೋದಿ ನಿಮ್ಮ ಸಮಾಜಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಒಳ ಮೀಸಲಾತಿ ಜಾರಿಗೊಳಿಸಲು ಮುಂದಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ದೇಶದ ನೂರ ನಲವತ್ತು ಕೋಟಿಜನರಿಗೆ ಉಚಿತ ಲಸಿಕೆ ಕೊಡಿಸಿದ್ದರಿಂದ ಸಾವು-ನೋವಿನ ಪ್ರಮಾಣ ಕಡಿಮೆಯಾಗಿದೆ. ಮುಂದುವರೆದ ಬೇರೆ ಬೇರೆ ದೇಶಗಳಲ್ಲಿ ಹಣಪಡೆದು ಲಸಿಕೆ ನೀಡಲಾಗಿದೆ. ಇವೆಲ್ಲಾ ಅಂಶವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರಿಗೆ ಮತ ನೀಡಿ ಎಂದು ಕೆ.ಎಸ್.ನವೀನ್ ಕೋರಿದರು.ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ನಾಗರಾಜ್ಬೇದ್ರೆ, ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಶಿವಣ್ಣ, ಎಸ್ಸಿ ಮೋರ್ಚಾದ ಕಿರಣ್ ಡಿ.ಎಸ್.ಹಳ್ಳಿ, ಮಾದಿಗ ಸಮುದಾಯದ ಮುಖಂಡರುಗಳಾದ ಮಂಜು, ಮೈಲಾರಿ, ನವೀನ್, ತಿಪ್ಪಣ್ಣ, ಅರುಣ್, ಶಿವು ಇವರುಗಳು ಮತಯಾಚನೆಯಲ್ಲಿದ್ದರು.