i
ಸೇವಾ ನ್ಯೂನ್ಯತೆ ಪರಿಗಣಿಸಿ ಪರಿಹಾರ ನೀಡಲು ಆದೇಶ…
ಚಂದ್ರವಳ್ಳಿ ನ್ಯೂಸ್,
ಶಿವಮೊಗ್ಗ : Order to provide compensation considering service deficiency… ಅರ್ಜಿದಾರರಾದ ಶ್ ಜಯಶ್ರೀ ಶೆಣೈ ಕೆ.ಬಿ. ಜಯಪ್ರಕಾಶ್ ಎಂಬುವವರು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂ., ಲಿ., ಭದ್ರಾವತಿ ಮತ್ತು ಶಿವಮೊಗ್ಗ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ವಿಮಾ ಮೊತ್ತ ಪಾವತಿಸುವಂತೆ ಎದುರುದಾರರಿಗೆ ಆದೇಶಿಸಿದೆ.
ಜಯಶ್ರೀ ಶೆಣೈ ಕೆ.ಬಿ. ಜಯಪ್ರಕಾಶ್ ಇವರು ವಿಜಯಾ ಮೋಟಾರ್ ಸರ್ವೀಸ್ನ ಬಸ್ ಮಾಲೀಕರಾಗಿದ್ದು, 2022 ರಲ್ಲಿ ಈ ಕಂಪನಿಯ ಬಸ್ ಅಪಘಾತಕ್ಕೊಳಗಾಗಿ ಹಾನಿಯಾಗಿತ್ತು. ಈ ಸಂಬಂಧ ನ್ಯೂ ಇಂಡಿಯಾ ಅಶ್ಯೂರನ್ಸ್ ಕಂಪೆನಿಯನ್ನು ಸಂಪರ್ಕಿಸಿ ವಿಮಾ ಪರಿಹಾರ ಮೊತ್ತ ಸಂದಾಯ ಮಾಡುವಂತೆ ಕೋರಿದ್ದರು.
ಆದರೆ ಕಂಪನಿಯವರು ಬಸ್ ಮಾಲೀಕ ದಿವಂಗತ ಜಯಪ್ರಕಾಶ್ ಹೆಸರಿನ ಆರ್..ಸಿ. ವರ್ಗಾವಣೆಯ ನಂತರ ಕಾನೂನಿಗೆ ಅನುಸಾರವಾಗಿ 14 ದಿನಗಳೊಳಗಾಗಿ ವಿಮಾ ಪಾಲಿಸಿಯನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಂಡಿಲ್ಲ ಮತ್ತು ಬಸ್ ಅಪಘಾತಕ್ಕೊಳಗಾದ ದಿನ ಊರ್ಜಿತ ಪರವಾನಿಗೆ ಇಲ್ಲ ಎಂಬ ಕಾರಣ ನೀಡಿ ಪರಿಹಾರ ಮೊತ್ತ ನೀಡಲು ನಿರಾಕರಿಸಿದ್ದರು.
ಆಯೋಗವು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಅರ್ಜಿದಾರರು ಬಸ್ ಮಾಲೀಕ ದಿವಂಗತ ಕೆ.ಬಿ ಜಯಪ್ರಕಾಶ್ರವರ ಪತ್ನಿಯಾಗಿದ್ದು ಕಾನೂನುಬದ್ಧ ಹಕ್ಕುದಾರರಾಗಿರುತ್ತಾರೆ. ಆದ್ದರಿಂದ ಪಾಲಿಸಿಯ 10ನೇ ನಿಬಂಧನೆಯ ಪ್ರಕಾರ ವಿಮಾದಾರರ ಮರಣದ ದಿನಾಂಕದಿಂದ ಮೂರು ತಇಂಗಳ ಒಳಗಾಗಿ ಯಾವುದೇ ಅವಧಿಯಲ್ಲಿ ವಿಮಾ ಪಾಲಿಸಿಯನ್ನು ಬದಲಾಯಿಸಿಕೊಳ್ಳಲು ಅರ್ಹರಾಗಿರುತ್ತಾರೆ. ಹೀಗಾಗಿ ಅಪಘಾತಕ್ಕೊಳಗಾದ ವಾಹನಕ್ಕೆ ಸಂಬಂಧಿಸಿದ ಹಾನಿಯ ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆಂದು ಪರಿಗಣಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿದೆ.
ಎದುರುದಾರು ಅರ್ಜಿದಾರರಿಗೆ ಪಾಲಿಸಿಗೆ ಅನುಗುಣವಾಗಿ ಬಸ್ ರಿಪೇರಿಯ ಖರ್ಚು ರೂ. 1,28,486/-ಗಳನ್ನು ಶೇ.9% ವಾರ್ಷಿಕ ಬಡ್ಡಿಯೊಂದಿಗೆ ಪಾವತಿಸುವುದು. ಹಾಗೂ ತಮ್ಮ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರ ಹಾಗೂ ರೂ.15,000 ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ರೂ. 10,000/-ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿ ದೆ.
ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಬಾಂಡ್ಯ ಇವರ ಪೀಠವು ಏ.16 ರಂದು ಈ ತೀರ್ಪನ್ನು ಆದೇಶಿಸಿದೆ.