i
ವಿವಾಹ ದಿನದಂದು ಮತದಾನ ಮಾಡಿದ ಹೊಸ ಜೋಡಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಎಚ್ ಸಿ ಎಸ್ ಕುಟುಂಬದ ಎಚ್.ಎ ಸತ್ಯ ತಂದೆ ಎಚ್ ಎಸ್ ಅಮರನಾಥ್ ಅವರು ಏಪ್ರಿಲ್ 26ರಂದು ಶುಕ್ರವಾರ ಹಿರಿಯೂರು ನಗರದ ತುಳಸೀ ಕಲ್ಯಾಣ ಮಂಟಪದಲ್ಲಿ ಶಿವಮೊಗ್ಗದ ವಧು ಪಲ್ಲವಿ ಅವರೊಂದಿಗೆ ಬೆಳಿಗ್ಗೆ 11 ಗಂಟೆಗೆ ವಿವಾಹ ಮಾಡಕೊಂಡ ಅವರು ವಿವಾಹದ ನಂತರ ಮತದಾನ ಕೇಂದ್ರಕ್ಕೆ ಮದುವೆ ಡ್ರಸ್ ನಲ್ಲೇ ತೆರಳಿ ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಹಿರಿಯೂರು ನಗರದ 20ನೇ ವಾರ್ಡ್ ನಿವಾಸಿಯಾಗಿದ್ದು ಇವರು ಮಾಂಗಲ್ಯ ಧಾರಣೆ ಕಾರ್ಯಕ್ರಮ ಮುಗಿದ ನಂತರ ಬೂತ್ ಸಂಖ್ಯೆ 174ರಲ್ಲಿ ಪತ್ನಿ ಹಾಗೂ ಕುಟುಂಬದ ಸದಸ್ಯರೊಂದಿಗೆ ನೆಹರು ಮೈದಾನದ ಆವರಣದಲ್ಲಿರುವ ನಾಕೋಡ ಭೇರವ ಶಾಲೆಯಲ್ಲಿ ತೆರೆಯಲಾಗಿದ್ದು ಬೂತ್ ಗೆ ತೆರಳಿ ಮತದಾನ ಮಾಡುವ ಮೂಲಕ ಜಾಗೃತಿ ಮೂಡಿಸಿದರು.
ನೂತನ ವಧು ವರರ ಕಾರ್ಯಕ್ಕೆ ಕುಟುಂಬದವರು ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.