i
ಬೀಟೆ, ಸಾಗವಾನಿ ನಾಟಾ ಸಾಗಿಸುತ್ತಿದ್ದವರ ಬಂಧನ….
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಆಯನೂರು, ಕುಂಸಿ ಭಾಗದ ಅರಣ್ಯದಲ್ಲಿ ಬೀಟೆ ಮತ್ತು ಸಾಗವಾನಿಮರ ಕಡಿದು ಶಿಕಾರಿಪುರಕ್ಕೆ ಸಾಗಿಸುತ್ತಿದ್ದ ವೇಳೆ ಅರಣ್ಯ ಅಧಿ ಕಾರಿಗಳು ದಾಳಿನಡೆಸಿ ಇಬ್ಬರನ್ನು ಬಂಧಿಸಿ, ನಾಟಾ ಸಹಿತ ವಾಹನ ವಶಪಡಿಸಿಕೊಂಡ ಘಟನೆ ಅಂಜನಾಪುರ ಬಳಿ ನಿನ್ನೆ ಸಂಜೆ ಸಂಭವಿಸಿದೆ.
ಚಾಲಕ ಸಚಿನ್ ಮತ್ತು ಕಲ್ಮನೆಯ ವೆಂಕಟೇಶ್ ಬಂಧಿತರು. ಖಚಿತ ಮಾಹಿತಿಮೇರೆಗೆ ಈ ದಾಳಿನಡೆಯಿತು. ವಾಹನ ನಿಲ್ಲಿಸುವಂತೆ ಸೂಚಿಸಿದರೂ ನಿಲ್ಲಿಸದಿದ್ದಾಗ ಬೆನ್ನಟ್ಟಿ ತಡೆಯಲಾಯಿತು. ವಾಹನದಲ್ಲಿ ಬೀಟೆ ಮತ್ತು ಸಾಗವಾನಿನಾಟಾ ಇತ್ತು. ಈ ಕೃತ್ಯದಲ್ಲಿ ಭಾಗಿಯಾದ ಇತರರ ಪತ್ತೆಗೆ ಬಲೆ ಬೀಸಲಾಗಿದೆ. ಆಯನೂರು ಆರ್ ಎಫ್ ಓ ಗೀತಾ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಯಿತು.