i
ಸ್ಫೂರ್ತಿ-2024 ಅಂಗವಾಗಿ ವಿದ್ಯಾರ್ಥಿಗಳಿಂದ ಆಹಾರ ಮೇಳ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಫೂರ್ತಿ-೨೦೨೪ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದ ಅಂಗವಾಗಿ ಮಂಗಳವಾರ ವಿದ್ಯಾರ್ಥಿಗಳಿಂದ ಆಹಾರ ಮೇಳವನ್ನು ಆಯೋಜಿಸಲಾಗಿತ್ತು.
ಆಹಾರ ಮೇಳಕ್ಕೆ ಪ್ರಾಚಾರ್ಯ ಡಾ.ಭರತ್ ಪಿ ಬಿ ಚಾಲನೆ ನೀಡಿದರು. ಆಹಾರ ಮೇಳಕ್ಕೆ ತೀರ್ಪುಗಾರರಾಗಿ ಕೆ.ಸಿ.ವೀಣಾ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಸ್ಫೂರ್ತಿ-೨೦೨೪ರ ಸಂಚಾಲಕರಾದ ಡಾ. ಬಿ ಜಿ ಕುಮಾರಸ್ವಾಮಿ,ಡಾ.ದೇವಿಕ ಬಿ ಜಿ,ಡಾ.ನಿರಂಜನ್ ಈ,ಪ್ರೊ. ಸುದರ್ಶನ್ ಎಂ ಕೆ ಉಪಸ್ಥಿತರಿದ್ದರು.ಆಹಾರ ಮೇಳದಲ್ಲಿ ವಿದ್ಯಾರ್ಥಿಗಳೇ ತಯಾರಿಸಿದ ಪುಳಿಯೊಗರೆ, ಪಾನಿಪೂರಿ,ವಡಾಪಾವ್,ಮಂಡಕ್ಕಿ ಮೆಣಸಿನಕಾಯಿ,ಗೊಜ್ಜವಲಕ್ಕಿ, ಪಾನಿಯಗಳಾದ ಕೋಕಂ,ನನ್ನಾರಿ ಇತ್ಯಾದಿ ತಿಂಡಿ ತಿನಿಸುಗಳನ್ನು ವೀಕ್ಷಕರು ಸವಿದರು.