i
ಅಪರಿಚಿತ 2 ಶವಗಳು ಪತ್ತೆ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿ ತುರುವೇಕೆರೆ ಟೌನ್ ಬಾಣಸಂದ್ರ ರಸ್ತೆಯಲ್ಲಿರುವ ರಂಗನಾಥ ವೈನ್ಸ್ ಪಕ್ಕದ ಸೊಸೈಟಿ ಮುಂಭಾಗದಲ್ಲಿ ಏಪ್ರಿಲ್ ೧೭ರಂದು ಸುಮಾರು ೩೫ ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ.
ಅಂತೆಯೇ ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿ ಕರಡಗೆರೆ ಗ್ರಾಮದ ಸರ್ವೇ ನಂಬರ್ ೬೬/೬ರ ಜಮೀನಿನಲ್ಲಿ ಏಪ್ರಿಲ್ ೧೮ರಂದು ಕೊಳೆತ ಸ್ಥಿತಿಯಲ್ಲಿ ಸುಮಾರು ೫೦ ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು, ವಾರಸುದಾರರು ತಿಳಿದು ಬಂದಿರುವುದಿಲ್ಲ.
ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.