i
ಮೇ-7 ರಂದು ರಾತ್ರಿ “ಸಾವು ತಂದ ಸೌಭಾಗ್ಯ”ಸಾಮಾಜಿಕ ನಾಟಕ ಪ್ರದರ್ಶನ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ನವ ತರುಣ ಕಲಾ ಸಂಘದ ವತಿಯಿಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ ಇವರ ಸಹಯೋಗದಲ್ಲಿ ನಗರ ದೇವತೆಗಳಾದ ತಿಪ್ಪಿನಘಟ್ಟಮ್ಮ ಹಾಗೂ ಬರಗೇರಮ್ಮ ಅವರ ಭೇಟಿ ಉತ್ಸವ ಪ್ರಯುಕ್ತ ಕರುವಿನಕಟ್ಟೆ ವೃತ್ತದ ನವ ತರುಣ ಕಲಾ ಸಂಘದ ಸದಸ್ಯರು ಕೂಡಿಕೊಂಡು ಇದೇ ವೃತ್ತದಲ್ಲಿ ಇದೆ ಮೇ- 7ರಂದು ಮಂಗಳವಾರ ಅಂದರೆ ಇಂದು ರಾತ್ರಿ 9.30 ಗಂಟೆಯಿಂದ ಹೆಚ್ .ಕೆ .ಮಲ್ಲಿಕಾರ್ಜುನ ತುರ್ಚಘಟ್ಟ ಅವರ ವಿರಚಿತ, “ಸಾವು ತಂದ ಸೌಭಾಗ್ಯ” ಅರ್ಥಾತ್ “ಅರಿಶಿನ ತಂದ ಆಮಂತ್ರಣ” ಎಂಬ ಸಾಮಾಜಿಕ ಹಾಸ್ಯ ಭರಿತ ನಾಟಕವನ್ನು ಅಭಿನಯಿಸಲಿದ್ದಾರೆ ಎಂದು ಸಂಘದ ಪ್ರೋತ್ಸಾಹಕರು, ನಗರಸಭೆ ಮಾಜಿ ಅಧ್ಯಕ್ಷರು ಆದ ಸಿ. ಟಿ. ಕೃಷ್ಣಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಾಟಕ ಪ್ರದರ್ಶನಗೊಳ್ಳುವ ಕರುವಿಕಟ್ಟೆ ವೃತ್ತದಲ್ಲಿ ಬಯಲು ರಂಗಮಂಟಪವನ್ನು ದೊಡ್ಡ ಚೆಲ್ಲೂರು ಮಾರುತಿ ಡ್ರಾಮಾ ಸೀನರಿಯವರು ಹಾಕಲಿದ್ದು, ಪರಶುರಾಮಪುರದ ಆರ್. ಚಿದಾನಂದ ಅವರ ಉತ್ತಮ ಆಧುನಿಕ ಸೌಲಭ್ಯಗಳೊಡಗೂಡಿದ ಧ್ವನಿ ಮತ್ತು ಬೆಳಕು ಸಂಯೋಜನೆ ಹಾಗೂ ಝಗಮಗಿಸುವ ವಿದ್ಯುತ್ ಅಲಂಕಾರಗಳಿಂದ ಕಂಗೊಳಿಸುವ ವೇದಿಕೆಯಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ,ಸ್ನೇಹಿತರು,ಹಿತೈಷಿಗಳು, ವ್ಯಾಪಾರೋದ್ಯಮಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಕಲೆಗೆ ಪರೋಕ್ಷವಾಗಿ ಸಹಕಾರ, ನೆರವು ನೀಡುತ್ತಿದ್ದಾರೆ ಎಂದು ಸಂಘದ ಸದಸ್ಯರು ನಾಟಕದಲ್ಲಿ ಖಳನಾಯಕನ ಪಾತ್ರದಾರಿಯಾಗಿ ಅಭಿನಯಿಸಲಿರುವ ಶ್ರೀನಿವಾಸ್. ಎಂ ಅವರು ನಾಟಕದ ಸಿದ್ಧತೆ ಬಗ್ಗೆ ತಿಳಿಸಿದ್ದಾರೆ. ನವ ತರುಣ ಕಲಾ ಸಂಘವು ಚಿತ್ರದುರ್ಗದಲ್ಲಿ ಜನ್ಮ ತಾಳಿ ಹಲವು ದಶಕಗಳೇ ಸಂದಿವೆ. ಭೇಟಿ ಉತ್ಸವ ನಿಮಿತ್ತ ಹಾಗೆ ಬೇರೆ ಬೇರೆ ಸಾಂಸ್ಕೃತಿಕ ಉತ್ಸವಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ ಎಂದು ಅವರು ತಿಳಿಸಿದ್ದಾರೆ, ಹೆಚ್ಚಿನ ಮಾಹಿತಿಗಾಗಿ ಶ್ರೀನಿವಾಸ್ ಎಂ 9902752274 ಇವರನ್ನು ಸಂಪರ್ಕಿಸಬಹುದಾಗಿದೆ.