i
ಮೇ.7ರಂದು ಮಂಗಳವಾರ ಅನಿಯಮಿತ ವಿದ್ಯುತ್ ವ್ಯತ್ಯಯ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಬೆವಿಕಂ ಉಪ ವಿಭಾಗ-೨ ವ್ಯಾಪ್ತಿ ಗೂಳಹರಿವೆಯಲ್ಲಿ ೧೧ಕೆವಿ ಮಾರ್ಗವನ್ನು ಸ್ಥಳಾಂತರಿಸುವ ಕಾಮಗಾರಿ ಕೈಗೊಂಡಿರುವುದರಿಂದ ಮೇ ೭ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಗೂಳಹರಿವೆ, ಗೂಳೆಹರಿವೆ ಕಾಲೋನಿ, ಏರಿ ಹಿಂದೆ ಪಾಳ್ಯ, ವೀರರಾಜಪ್ಪನ ಪಾಳ್ಯ, ಮತ್ತಿತರ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಹಬೂಬ್ ಷರೀಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೧೬-೨೨೯೩೮೭೮ ಅಥವಾ ಜಯನಗರ ಶಾಖಾಧಿಕಾರಿ ಮೊಬೈಲ್ ಸಂ. ೯೪೪೯೮೪೪೩೧೨ನ್ನು ಸಂಪರ್ಕಿಸಬಹುದಾಗಿದೆ.