i
ಪತ್ರಕರ್ತರ ತಾಲ್ಲೂಕು ಸಂಘಗಳ ಪುನರ್ ರಚನೆಗೆ ಜಿಲ್ಲಾ ಸಂಘ ನಿರ್ಧಾರ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು ಗ್ರಾಮಾಂತರ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಹಾಲಿ ಇರುವ ಪದಾಧಿಕಾರಿಗಳ ಅವಧಿ ಮುಗಿದ ಕಾರಣ ಈ ಎರಡು ತಾಲ್ಲೂಕು ಸಂಘಗಳಿಗೆ ನೂತನ ಪದಾದಿಕಾರಿಗಳ ಆಯ್ಕೆ ಮಾಡಲಾಗುವುದು ಎಂದು kuwj ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಕ್ಷ ಜಿ.ಶ್ರೀನಿವಾಸ್ ಮತ್ತು ಪ್ರಧಾನ ಕಾರ್ಯದರ್ಶಿ ಆರ್ ರಮೇಶ್ ತಿಳಿಸಿದರು.
ಶ್ರೀಘ್ರದಲ್ಲೇ ನೂತನ ಪದಾಧಿಕಾರಿಗಳ ಆಯ್ಕೆ ನೆಡಸಿ 2024-25 ನೇ ಸಾಲಿನ ಗುರುತಿನ ಚೀಟಿ ವಿತರಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.